ಶ್ರೀಮತಿ ಶೆಟ್ಟಿ ಕೊಲೆ ಪ್ರಕರಣ: ಜೋನಸ್‌ಗೆ ನ್ಯಾಯಾಂಗ ಬಂಧನ

Update: 2019-05-19 15:45 GMT

ಮಂಗಳೂರು, ಮೇ 19: ನಗರದ ಅಮರ್ ಆಳ್ವ ಲೈನ್ ನಿವಾಸಿ ಮಹಿಳೆ ಶ್ರೀಮತಿ ಶೆಟ್ಟಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಜೋನಸ್ ಜೂಲಿನ್ ಸ್ಯಾಮನ್ಸ್(36)ನನ್ನು ಶನಿವಾರ ರಾತ್ರಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಮೇ 29ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಈ ಪ್ರಕರಣದಲ್ಲಿ ಆರೋಪಿಗೆ ಸಹಕಾರ ನೀಡಿದ ಜೋನಸ್ ಪತ್ನಿ ವಿಕ್ಟೋರಿಯಾ ಮಥಾಯಿಸ್ (46)ನನ್ನು ಈಗಾಗಲೇ ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾಳೆ.

ಆರೋಪಿ ಜೋನಸ್ ಶನಿವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ಬಳಿಕ ಆತನನ್ನು ಕೊಲೆ ಕೃತ್ಯ ನಡೆದ ಮನೆಗೆ, ಮೃತದೇಹ ಪತ್ತೆಯಾದ ನಂದಿಗುಡ್ಡ, ರುಂಡ ಪತ್ತೆಯಾದ ಕದ್ರಿ ಪೆಟ್ರೋಲ್ ಪಂಪ್ ಬಳಿ ಹಾಗೂ ಕಾಲು ಪತ್ತೆಯಾದ ಕದ್ರಿ ಪಾರ್ಕ್ ಜಾಗ, ಶ್ರೀಮತಿ ಶೆಟ್ಟಿಯ ಸ್ಕೂಟರ್ ಇಡಲಾದ ನಾಗುರಿ ಪ್ರದೇಶಕ್ಕೆ ಕರೆದೊಯ್ದು ಆರೋಪಿಯೊಂದಿಗೆ ಸ್ಥಳ ಮಹಜರು ನಡೆಸಲಾಯಿತು. ಬಳಿಕ ಆರೋಪಿಯನ್ನು ವಿಚಾರಣೆ ನಡೆಸಿ ರಾತ್ರಿ ವೇಳೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News