ತೆಂಗಿನ ಮರದಿಂದ ಬಿದ್ದು ಮೃತ್ಯು
Update: 2019-05-19 16:13 GMT
ಬ್ರಹ್ಮಾವರ, ಮೇ 19: ತೆಂಗಿನ ಮರದಿಂದ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಮೇ 18ರಂದು ಬೆಳಗ್ಗೆ ನೀಲಾವರ ದೇವಸ್ಧಾನ ಬೆಟ್ಟು ಎಂಬಲ್ಲಿ ನಡೆದಿದೆ.
ಮೃತರನ್ನು ದೇವಸ್ಧಾನ ಬೆಟ್ಟು ನಿವಾಸಿ ವೈ.ಸತ್ಯನಾರಾಯಣ ರಾವ್(73) ಎಂದು ಗುರುತಿಸಲಾಗಿದೆ. ಇವರು ಮನೆಯ ಬಳಿಯ ತೆಂಗಿನ ಮರಕ್ಕೆ ಸಿಯಾಳ ತೆಗೆಯಲು ಏಣಿಯ ಸಹಾಯದಿಂದ ಏರಿದ್ದು, ಸುಮಾರು 20 ಅಡಿ ಎತ್ತರದಲ್ಲಿದ್ದ ಇವರು ಆಯ ತಪ್ಪಿ ಕೆಳಗೆ ಬಿದ್ದು ಗಂಭೀರವಾಗಿ ಗಾಯ ಗೊಂಡು ಮೃತಪಟ್ಟಿದ್ದಾರೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.