ದೈವಸ್ಥಾನ ಕಳವಿಗೆ ಯತ್ನ: ಆರೋಪಿ ಬಂಧನ

Update: 2019-05-19 16:29 GMT

ಕುಂದಾಪುರ, ಮೇ 19: ಹೇರಿಕುದ್ರು ಶ್ರೀಅರೆಕಲ್ಲು ಬೊಬ್ಬರ್ಯ ದೈವಸ್ಥಾನ ದಲ್ಲಿ ಕಳವಿಗೆ ಯತ್ನಿಸಿದ ಆರೋಪಿಯೊಬ್ಬನನ್ನು ಕುಂದಾಪುರ ಪೊಲೀಸರು ಮೇ 19ರಂದು ಬೆಳಗಿನ ಜಾವ 5 ಗಂಟೆ ಸುಮಾರಿಗೆ ಸಾರ್ವಜನಿಕರ ಸಹಾಯ ದೊಂದಿಗೆ ಬಂಧಿಸಿದ್ದಾರೆ.

ಭಟ್ಕಳದ ಸತೀಶ್ ಮಹಾದೇವ ನಾಯ್ಕ (30) ಬಂಧಿತ ಆರೋಪಿ.

ದೈವಸ್ಥಾನದ ಬಳಿ ಅಪರಿಚಿತ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ತಿರು ಗಾಡುತ್ತಿರುವ ಕುರಿತು ಸ್ಥಳೀಯರು ನೀಡಿದ ಮಾಹಿತಿಯಂತೆ ದೇವಸ್ಥಾನದ ಆಡಳಿತ ಮೊಕ್ತೇಸರ ಶಂಕರ ಶೆಟ್ಟಿ ದೈವಸ್ಥಾನದ ಬಳಿ ಬಂದು ಪರಿಶೀಲನೆ ನಡೆಸಿ ದರು. ಆಗ ಸತೀಶ್ ಕಬ್ಬಿಣದ ಸರಳಿನಿಂದ ದೈವಸ್ಥಾನದ ಹೊರಗಿರುವ ಕಾಣಿಕೆ ಡಬ್ಬಿಯನ್ನು ಮೀಟುತ್ತಿದ್ದು, ಟಾರ್ಚ್‌ಲೈಟ್‌ಗೆ ಅಲ್ಲಿಂದ ಓಡಿ ಹೋದನು.

ಬಳಿಕ ಸ್ಥಳೀಯರೆಲ್ಲ ಆಸುಪಾಸಿನಲ್ಲಿ ಹುಡುಕಿದಾಗ ಆತ ದೈವಸ್ಥಾನದ ಹಿಂದಿರುವ ಪೊದೆಯಲ್ಲಿ ಪತ್ತೆಯಾಗಿದ್ದು, ಆತನನ್ನು ಪೊಲೀಸರ ವಶಕ್ಕೆ ಒಪ್ಪಿಸ ಲಾಯಿತು. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News