ಮೇ 22 : ಮಂಗಳೂರು ಮುಸ್ಲಿಂ ಯೂತ್ ಕೌನ್ಸಿಲ್ ವತಿಯಿಂದ ಇಫ್ತಾರ್ ಕೂಟ

Update: 2019-05-19 16:56 GMT

ಬೆಂಗಳೂರು: ಮಂಗಳೂರು ಮುಸ್ಲಿಂ ಯೌತ್ ಕೌನ್ಸಿಲ್  ಆಶ್ರಯದಲ್ಲಿ  ಮೇ 22 ರಂದು ಬೆಂಗಳೂರಿನ ಕಬ್ಬನ್ ಪೇಟೆಯ ಹಮೀದ್ ಷಾ  ಕಾಂಪ್ಲೆಕ್ಸ್ ನಲ್ಲಿ ಇಫ್ತಾರ್ ಕೂಟ ನಡೆಯಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ. ಎಮ್. ಉಮ್ಮರ್ ಹಾಜಿ ವಹಿಸಲಿದ್ದಾರೆ.  ಹಾಶಿಮ್ ಜೆಫ್ರಿ ತಂಙಳ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕಲ್ಲೇಗ ಜುಮಾ ಮಸೀದಿ ಖತೀಬ್ ಅಬೂಬಕರ್ ಸಿದ್ದೀಕ್ ಜಲಾಲಿ ಮತ್ತು ಶಾಫಿ ಸಹದಿ ಬೆಂಗಳೂರು ಕಾರ್ಯಕ್ರಮದಲ್ಲಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.

ಕಾರ್ಯಕ್ರಮದಲ್ಲಿ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಕರ್ನಾಟಕ ವಕ್ಫ್ ಸಚಿವರಾದ ಝಮೀರ್ ಅಹ್ಮದ್ ಖಾನ್,  ರಾಜ್ಯ ನಗರಾಭಿವೃದ್ಧಿ ಸಚಿವ ಯು ಟಿ ಖಾದರ್, ವಿಧಾನಸಭಾ ಸದಸ್ಯ ಬಿ ಎಮ್ ಫಾರೂಕ್, ಮಾಜಿ ಪೊಲೀಸ್ ಆಯುಕ್ತರಾದ ಜಿ.ಎ ಬಾವ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಝಫ್ರುಲಾಹ್ ಖಾನ್, ಬಿಬಿಎಮ್ ಪಿ  ಕಾರ್ಪೊರೇಟರ್ ಗಳಾದ  ಮುಜಾಹಿದ್ ಪಾಷ, ಇಮ್ರಾನ್ ಪಾಷ, ಪುತ್ತೂರು ಕಾರ್ಪೊರೇಟರ್ ಮಹಮದ್ ರಿಯಾಝ್ ಕೆ, ಕುದ್ರೋಳಿ ವರ್ಲ್ಡ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಫೀಝ್ ಕುದ್ರೋಳಿ, ಜಯನಗರ ಈದ್ಗ ಮಸೀದಿಯ ಪ್ರಧಾನ ಕಾರ್ಯದರ್ಶಿಯಾದ ಒಬೇದುಲ್ಲಾಹ್ ಖಾನ್, ಆರ್ ಟಿ ನಗರ ಸಂಚಾರ ಪೊಲೀಸ್ ಆಯುಕ್ತರಾದ ಬಶೀರ್ ಅಹ್ಮದ್, ಹೋಟೆಲ್ ಎಂಪೈರ್ ಪಿಆರ್ ಒ ಅಶ್ರಫ್ ಯು ಕೆ, ಸಿ ಎ ನೌಫಾಲ್ ಮುಹಮ್ಮದ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News