ಅಡ್ಯನಡ್ಕ ಪೇಟೆಯ ಅಂಗಡಿ, ಕಾಣಿಕೆ ಡಬ್ಬಿಯಿಂದ ಕಳವಿಗೆ ಯತ್ನ

Update: 2019-05-19 17:01 GMT

ಬಂಟ್ವಾಳ, ಮೇ 19: ಅಡ್ಯನಡ್ಕ ಪೇಟೆಯ ಮೂರು ಅಂಗಡಿಯಿಂದ ಕಳವಿಗೆ ಯತ್ನ ಹಾಗೂ ಭಜನಾ ಮಂದಿರಕ್ಕೆ ಸೇರಿದ ಕಾಣಿಕೆ ಡಬ್ಬಿಯ ಬೀಗ ಒಡೆದು ಕಳವು ಮಾಡಿದ ಘಟನೆ ರವಿವಾರ ಬೆಳಕಿಗೆ ಬಂದಿದೆ.

ಕಲ್ಲಡ್ಕ - ಸಾರಡ್ಕ ಹೆದ್ದಾರಿಯ ಅಡ್ಯನಡ್ಕದಲ್ಲಿ ಕಳವು ಪ್ರಕರಣ ನಡೆದಿದೆ. ಬಸ್ ನಿಲ್ದಾಣದ ಸಮೀಪದಲ್ಲಿದ್ದ ಅಡ್ಯನಡ್ಕ ಶ್ರೀ ದುರ್ಗಾಪರಮೇಶ್ವರಿ ಅಯ್ಯಪ್ಪ ಸ್ವಾಮೀ ಭಜನಾ ಮಂದಿರಕ್ಕೆ ಸೇರಿದ ಕಾಣಿಕೆ ಡಬ್ಬಿ ಬೀಗ ಒಡೆದು ಚಿಲ್ಲರೆ ಹಣ ಕಳವು ಮಾಡಲಾಗಿದೆ.

ಬಟ್ಟೆ ಅಂಗಡಿ, ಶಾಮಿಯಾನ ಅಂಗಡಿ, ಜನರಲ್ ಸ್ಟೋರ್ ಸೇರಿ 3 ಅಂಗಡಿಗಳ ಬೀಗ ಒಡೆದ ಸ್ಥಿತಿಯಲ್ಲಿ ಬೆಳಗ್ಗೆ ಪತ್ತೆಯಾಗಿದ್ದು, ಯಾವುದೇ ಸಾಮಗ್ರಿಗಳು ಕಳವಾಗಿಲ್ಲ. ಕಳವಿಗೆ ಯತ್ನಿಸಿದ ಸ್ಥಳದಲ್ಲಿ ಕಬ್ಬಿಣದ ರಾಡ್ ಪತ್ತೆಯಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News