ಬೈಕ್‍ಗಳ ನಡುವೆ ಢಿಕ್ಕಿ: ಮೂವರಿಗೆ ಗಾಯ

Update: 2019-05-19 17:02 GMT

ಬಂಟ್ವಾಳ, ಮೇ 19: ಬೈಕ್‍ಗಳ ನಡುವೆ ಮುಖಾಮುಖಿ ಢಿಕ್ಕಿಯಾಗಿ ಮೂವರು ಗಂಭೀರ ಗಾಯಗೊಂಡ ಘಟನೆ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಗಡಿಯಾರದಲ್ಲಿ ರವಿವಾರ ನಡೆದಿದೆ.

ಉಪ್ಪಿನಂಗಡಿ ಮೂಲದ ಬೈಕ್ ಹಾಗೂ ಮಾಣಿ ಕಡೆಯಿಂದ ಬಂದ ಇನ್ನೊಂದು ಬೈಕ್ ಮುಖಾಮುಖಿಯಾಗಿ  ಢಿಕ್ಕಿಯಾಗಿದೆ. ಬೈಕ್‍ನಲ್ಲಿದ್ದ ಮೂವರು ಗಂಭೀರ ಗಾಯಗೊಂಡಿದ್ದು, ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಟ್ಲ ಎಸ್ಸೈ ಯಲ್ಲಪ್ಪ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News