ಕಮಲಹಾಸನ್‌ಗೆ ಮದ್ರಾಸ್ ಹೈಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು

Update: 2019-05-20 06:46 GMT

ಚೆನ್ನೈ, ಮೇ 20: ಗೋಡ್ಸೆ ಕುರಿತು ನೀಡಿದ ಹೇಳಿಕೆಗೆ ತನ್ನ ವಿರುದ್ಧ ಅರಾವಕುರಿಚಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ನಟ ಹಾಗೂ ರಾಜಕಾರಣಿ ಕಮಲಹಾಸನ್‌ಗೆ ಬಂಧನದಿಂದ ರಕ್ಷಿಸಿಕೊಳ್ಳಲು ಮದ್ರಾಸ್ ಹೈಕೋರ್ಟ್‌ನ ಮದುರೈ ಪೀಠದ ಮೊರೆ ಹೋಗಿದ್ದು, ನ್ಯಾಯಪೀಠ ಸೋಮವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ತನ್ನ ಹೇಳಿಕೆ ತೀವ್ರ ವಿವಾದ ಸ್ವರೂಪ ಪಡೆದ ಕಾರಣ ಈ ಕುರಿತು ಹೈಕೋರ್ಟ್‌ಗೆ ಹೇಳಿಕೆ ನೀಡಿದ ಕಮಲಹಾಸನ್, ‘‘ನನ್ನ ಭಾಷಣ ಅಸ್ತಿತ್ವದ ಮೇಲೆ ಕೇಂದ್ರೀಕೃತವಾಗಿದೆ. ದ್ವೇಷವನ್ನು ಹುಟ್ಟುಹಾಕುತ್ತಿಲ್ಲ. ನಾಥೂರಾಮ್ ಗೋಡ್ಸೆಯ ಕುರಿತಾದ ಟೀಕೆಗಳು ಐತಿಹಾಸಿಕ ಸತ್ಯವಾಗಿದೆ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News