ಮಣಿಪಾಲ: ಮೇ 21ರಂದು ಸ್ವಯಂಪ್ರೇರಿತ ರಕ್ತದಾನ ಶಿಬಿರ

Update: 2019-05-20 16:43 GMT

ಉಡುಪಿ, ಮೇ 20: ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಕಳೆದ ಕೆಲವು ದಿನಗಳಿಂದ ರಕ್ತದ ತೀವ್ರ ಕೊರತೆ ಇದ್ದು ರೋಗಿಗಳಿಗೆ ರಕ್ತದ ಕೊರತೆಯಿಂದ ತುರ್ತು ಚಿಕಿತ್ಸೆಗೆ ಅನಾನುಕೂಲವಾಗುತ್ತಿದೆ.

ಇದರ ಕೊರತೆ ನೀಗಿಸಲು ಡಾ.ಜಿ.ಶಂಕರ್ ಪ್ಯಾಮಿಲಿ ಟ್ರಸ್ಟ್, ಮೊಗವೀರ ಯುವ ಸಂಘಟನೆ ಉಡುಪಿ ಬೆಳ್ಳಂಪಳ್ಳಿ ಘಟಕ, ಭದ್ರತಾ ವಿಭಾಗ ಮಾಹೆ ಮಣಿಪಾಲ ಇವರ ಆಶ್ರಯದಲ್ಲಿ, ರಕ್ತನಿಧಿ ವಿಭಾಗ ಕೆಎಂಸಿ ಇವರ ಸಹಕಾರದೊಂದಿಗೆ ಮೇ 21ರಂದು ಬೆಳಗ್ಗೆ 8:30ರಿಂದ ತುರ್ತು ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಲಿದೆ.

ಜಿಲ್ಲೆಯ ಸಹೃದಯಿ ರಕ್ತದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ಮಾಡುವಂತೆ ಹಾಗೂ ಹೆಚ್ಚಿನ ಮಾಹಿತಿಗಾಗಿ 9986668476 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸುವಂತೆ ಸಂಘಟಕರಾದ ಮಾಹೆ ಭದ್ರತಾ ವಿಭಾಗದ ಅಧಿಕಾರಿ ರತ್ನಾಕರ್ ಸಾಮಂತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News