ಆರ್ಯಭಟ ಪ್ರಶಸ್ತಿಗೆ ಕಲ್ಲಡ್ಕದ ಮುಹಮ್ಮದ್ ಯಾಸೀರ್ ಆಯ್ಕೆ

Update: 2019-05-20 17:10 GMT

ಬಂಟ್ವಾಳ : ಬೆಂಳೂರಿನ ಖಾಸಗಿ ಸಂಸ್ಥೆಯಾದ ಆರ್ಯಭಟ ಕಲ್ಚರಲ್ ಆರ್ಗನೈಝೇಶನ್ ಕೊಡಲ್ಪಟುವ ಅರ್ಯಭಟ ಅಂತರಾಷ್ಟ್ರೀಯ 2018ರ ಪ್ರಶಸ್ತಿಗೆ ಕಲ್ಲಡ್ಕದ ಯುವ ಉದ್ಯಮಿ, ಹಳೆಯ ವಸ್ತು ಸಂಗ್ರಹಾಲಯದ ಮೂಲಕ ಗಮನ ಸೆಳೆದಿರುವ ಮುಹಮ್ಮದ್ ಯಾಸೀರ್ ಅವರು ಆರ್ಯಭಟ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ರಾಜ್ಯದ ಕೆಲವೇ ಕೆಲವು ನೋಟು, ನಾಣ್ಯ ಸಹಿತ ಕರೆನ್ಸಿ ಸಂಗ್ರಾಹಕರಲ್ಲಿ ಯಾಸೀರ್ ಒಬ್ಬರು. ದೀವಟಿಗೆಯಿಂದ ಹಿಡಿದು, ಪಾತ್ರೆ ಪಗಡಗಳು ಅಷ್ಟೇ ಏಕೆ ಸಾಫ್ಟ್ ಡ್ರಿಂಕ್ಸ್ ಬಾಟಲಿಗಳಿಂದ ಹಿಡಿದು ಸ್ಟ್ಯಾಂಪುಗಳು ಹೀಗೆ ಅವರ ಸಂಗ್ರಹ ವೈವಿಧ್ಯ ಅಪಾರ. ಲೋಕಲ್ ಸಾಫ್ಟ್ ಡ್ರಿಂಕ್ ಬಾಟಲಿಗಳು ಎನಿಂದ ಝಡ್ ವರೆಗೆ, ಹಳೆದ ದಿನಬಳಕೆಯ ವಸ್ತುಗಳಿಂದ ಹೊಸ ವಸ್ತುಗಳವರೆಗೆ ಯಾಸೀರ್ ಸಂಗ್ರಹ ನಡೆಸಿದ್ದಾರೆಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News