​ಮೂಡುಶೆಡ್ಡೆ ಡ್ಯಾಮ್‌ಗೆ ಹಾರಿ ಯುವಕ ಆತ್ಮಹತ್ಯೆ

Update: 2019-05-22 16:33 GMT

ಮಂಗಳೂರು, ಮೇ 22: ಮೂಡುಶೆಡ್ಡೆ ಡ್ಯಾಮ್ (ಶಾಲೆಪದವು)ನ ನೀರಿಗೆ ಹಾರಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಶಾಲೆಪದವು ನಿವಾಸಿ ಜಗನ್ನಾಥ (24) ಮೃತ ಯುವಕ. ಮಂಗಳವಾರ ಮಧ್ಯಾಹ್ನ ಬಳಿಕ ಅವರು ಕಾಣೆಯಾಗಿದ್ದು, ಬುಧವಾರ ಮಧ್ಯಾಹ್ನ ವೇಳೆಗೆ ಮೃತ ದೇಹ ಡ್ಯಾಮಿನ ನೀರಿನಲ್ಲಿ ಪತ್ತೆಯಾಗಿದೆ. ಜಗನ್ನಾಥ ಅವರು ಈ ಹಿಂದೆ ಕುಂಟಿಕಾನದ ಪೇಟಿಎಂ ಕಚೇರಿ ಒಂದರಲ್ಲಿ ಕೆಲಸ ಮಾಡುತ್ತಿದ್ದು, ಕೆಲವು ಸಮಯದ ಹಿಂದೆ ಕೆಲಸ ಬಿಟ್ಟಿದ್ದನು. ಬಳಿಕ ಮನೆಯಲ್ಲಿಯೇ ಇದ್ದನು. ಮಂಗಳವಾರ ಮಧ್ಯಾಹ್ನ ಬಳಿಕ ನಾಪತ್ತೆಯಾದ ಆತನನ್ನು ಮನೆ ಮಂದಿ ಹುಡುಕಿದ್ದು, ಎಲ್ಲಿಯೂ ಪತ್ತೆಯಾಗಿರಲಿಲ್ಲ. ಸ್ಕೂಟರ್ ಮಾತ್ರ ಗುರುಪುರ ನದಿಯ ದಂಡೆಯಲ್ಲಿ ಡ್ಯಾಂ ಬಳಿ ಸಂಜೆ ಪತ್ತೆಯಾಗಿತ್ತು.

ಹಣದ ವ್ಯವಹಾರಕ್ಕೆ ಸಂಬಂಧಿಸಿ ಪೇಟಿಎಂ ಮಳಿಗೆಯವರು ಜಗನ್ನಾಥನಿಗೆ ಆಗಾಗ್ಗೆ ಫೋನ್ ಮಾಡುತ್ತಿದ್ದರು ಎನ್ನಲಾಗಿದ್ದು, ಮಂಗಳವಾರ ಬೆಳಗ್ಗೆ ಕೂಡ ಫೋನ್ ಬಂದಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಜಗನಾಥ ಅವರ ಆತ್ಮಹತ್ಯೆಯ ಬಗ್ಗೆ ಮನೆ ಮಂದಿ ಸಂಶಯ ವ್ಯಕ್ತಪಡಿಸಿದ್ದು, ಹಾಗಾಗಿ ಕಾವೂರು ಪೊಲೀಸರು ಐಪಿಸಿ 174 (ಸಿ) ಅನ್ವಯ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮೂಡುಶೆಡ್ಡೆ ಶಾಲೆ ಪದವಿನ ವೆಂಕಟೇಶ್ ಕುಲಾಲ್- ಜಯಲಕ್ಷ್ಮಿ ದಂಪತಿಯ ಪುತ್ರರಾಗಿದ್ದ ಜಗನ್ನಾಥ ಅವರು ತಂದೆ, ತಾಯಿ ಮತ್ತು ಸೋದರ ನನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News