ಎಸ್ಕೆಎಸ್ಸೆಸ್ಸೆಫ್ ಹಳೆಯಂಗಡಿ ವತಿಯಿಂದ ಇಪ್ತಾರ್ ಕೂಟ

Update: 2019-05-22 16:44 GMT

ಮಂಗಳೂರು: ಎಸ್ಕೆಎಸ್ಸೆಸ್ಸೆಫ್  ಹಳೆಯಂಗಡಿ ವತಿಯಿಂದ ಬೊಳ್ಳೂರು ಮದ್ರಸ ಹಾಲ್ ನಲ್ಲಿ ಬುದವಾರ ಬೃಹತ್ ಇಪ್ತಾರ್ ಕೂಟ ನಡೆಸಲಾಯಿತು.

ಬೊಳ್ಳೂರು ಮಸೀದಿ ಖತೀಬ್ ಮಹಮ್ಮದ್ ಅಝ್ಗರ್ ಪೈಝಿ ಕಾರ್ಯಕ್ರಮ ನೇತೃತ್ವ ವಹಿಸಿದ್ದರು. ಈ ಸಂದರ್ಭ ಎಸ್ಕೆಎಸ್ಸೆಸ್ಸೆಫ್ ಹಳೆಯಂಗಡಿ ಅಧ್ಯಕ್ಷ ಯೂಸೂಫ್ ಇಂದಿರಾ ನಗರ, ಬೊಳ್ಳೂರು ಮಸೀದಿ ಅಧ್ಯಕ್ಷ ಬಿ.ಎಮ್. ಇಬ್ರಾಹಿಂ, ಬೊಳ್ಳೂರು ಸದರ್ ಮುಅಲ್ಲಿಂ ನಾಸಿರ್ ಮುಸ್ಲಿಯಾರ್  ಹಾಗು ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News