‘ದಿ ವೈರ್’ ವಿರುದ್ಧದ ಮಾನನಷ್ಟ ಪ್ರಕರಣ ಹಿಂದೆಗೆದುಕೊಳ್ಳಲಿರುವ ಅದಾನಿ ಗ್ರೂಪ್

Update: 2019-05-22 17:22 GMT

ಹೊಸದಿಲ್ಲಿ,ಮೇ 22: ತನ್ನ ಕಂಪನಿಗಳ ವಿರುದ್ಧ ಲೇಖನಗಳಿಗಾಗಿ ಸುದ್ದಿ ಜಾಲತಾಣ ‘ದಿ ವೈರ್’ ಮತ್ತು ಅದರ ಸಂಪಾದಕರ ವಿರುದ್ಧ ಅಹ್ಮದಾಬಾದ್‌ನ ನ್ಯಾಯಾಲಯದಲ್ಲಿ ತಾನು ದಾಖಲಿಸಿರುವ ಎಲ್ಲ ಮಾನನಷ್ಟ ಪ್ರಕರಣಗಳನ್ನು ಹಿಂದೆಗೆದುಕೊಳ್ಳಲು ಅದಾನಿ ಗ್ರೂಪ್ ಸಜ್ಜಾಗಿದೆ.

ಸುದ್ದಿ ಜಾಲತಾಣದ ವಿರುದ್ಧ ಅದಾನಿ ಪವರ್ ಮಹಾರಾಷ್ಟ್ರ ಲಿ.ಎರಡು ಪ್ರಕರಣಗಳನ್ನು ಮತ್ತು ಅದಾನಿ ಪೆಟ್ರೋನೆಟ್ ಪೋರ್ಟ್ ದಹೇಜ್ ಒಂದು ಪ್ರಕರಣವನ್ನು ದಾಖಲಿಸಿದ್ದವು. ಸ್ಥಾಪಕ ಸಂಪಾದಕರಾದ ಸಿದ್ಧಾರ್ಥ ವರದರಾಜನ್ ಮತ್ತು ಎಂ.ಕೆ.ವೇಣು ಜೊತೆಗೆ ಸಿದ್ಧಾರ್ಥ ಭಾಟಿಯಾ,ಮನೋಬಿನ ಗುಪ್ತಾ,ಪಮೇಲಾ ಫಿಲಿಪೋಸ್ ಮತ್ತು ನೂರ್ ಮುಹಮ್ಮದ್ ಅವರನ್ನೂ ಈ ದಾವೆಗಳಲ್ಲಿ ಹೆಸರಿಸಲಾಗಿತ್ತು.

ಈ ಬೆಳವಣಿಗೆಯನ್ನು ವರದರಾಜನ್ ಅವರು ಸುದ್ದಿಸಂಸ್ಥೆಗೆ ದೃಢಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News