ಬೀಡಿ ಕಾರ್ಮಿಕರ ಮಾಹಿತಿ ನೋಂದಣಿ ಅಭಿಯಾನ

Update: 2019-05-22 17:23 GMT

ಉಡುಪಿ, ಮೇ 22: ಕಾರ್ಮಿಕ ಕಲ್ಯಾಣ ಇಲಾಖೆಯಲ್ಲಿ ಬೀಡಿ ಕಾರ್ಮಿಕರ ಮಾಹಿತಿಯನ್ನು ಡಿಜಿಟಲೀಕರಣಗೊಳಿಸುವ ಪ್ರಕ್ರಿಯೆ ಚಾಲನೆ ಯಲ್ಲಿದ್ದು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಬೀಡಿ ಕಾರ್ಮಿಕರು ತಮ್ಮ ಗುರುತಿನ ಚೀಟಿ, ಬ್ಯಾಂಕ್ ಖಾತೆ ವಿವರ, ರೇಷನ್ ಕಾರ್ಡ್ ಹಾಗೂ ಕುಟುಂಬ ಸದಸ್ಯರ ಆಧಾರ್ ಕಾರ್ಡ್ ಜೊತೆ ಹತ್ತಿರದ ಬೀಡಿ ಕಾರ್ಮಿಕರ ಆಸ್ಪತ್ರೆಯಲ್ಲಿ ಮಾಹಿತಿ ನೋಂದಾಯಿಸಬೇಕೆಂದು ಕಾರ್ಮಿಕ ಕ್ಯಾಣ ಆಯುಕ್ತ ಕೆ.ಶೇಖರ್ ತಿಳಿಸಿದ್ದಾರೆ.

ನೋಂದಣಿ ಪ್ರಕ್ರಿಯೆ ಕಳೆದ ವರ್ಷ ಪ್ರಾರಂಭವಾಗಿದ್ದು, ಈವರೆಗೆ ಕೇವಲ ಶೇ.30 ಬೀಡಿ ಕಾರ್ಮಿಕರು ಮಾತ್ರ ತಮ್ಮ ಮಾಹಿತಿಯನ್ನು ನೋಂದಾಯಿಸಿ ಕೊಂಡಿದ್ದಾರೆ. ಹೀಗಾಗಿ ಉಳಿದ ಕಾರ್ಮಿಕರು ಕೂಡಲೇ ತಮಗೆ ಹತ್ತಿರದ ಬೀಡಿ ಕಾರ್ಮಿಕ ಆಸ್ಪತ್ರೆಯಲ್ಲಿ ತಮ್ಮ ಹೆಸರು ಹಾಗೂ ಇತರ ಮಾಹಿತಿಯನ್ನು ನೋಂದಾಯಿಸಿಕೊಳ್ಳಬೇಕು.

ಕಾರ್ಮಿಕ ಇಲಾಖೆಯ ಯಾವುದೇ ಸೌಲ್ಯ ಪಡೆಯಲು ಮಾಹಿತಿ ನೋಂದಣಿ ಅವಶ್ಯಕವಾಗಿದೆ. ಬೀಡಿ ಕಾರ್ಮಿಕರ ಆಸ್ಪತ್ರೆಗಳು ಕಾರ್ಕಳ, ಉಡುಪಿ, ಮೂಡಬಿದ್ರೆ, ಪಡೀಲ್, ಕೈಕಂಬ, ತುಂಬೆ, ದೇರಳಕಟ್ಟೆ, ಕಾಟಿಪಳ್ಳ, ಕಲ್ಲಡ್ಕ, ಪುತ್ತೂರು, ಉಪ್ಪಿನಂಗಡಿ ಹಾಗೂ ವಾಮನಪದವಿನಲ್ಲಿ ಕಾರ್ಯ ವೆಸಗುತಿದ್ದು, ಮಾಹಿತಿ ನೋಂದಣಿ ಅಭಿಯಾನ ಜೂ.15ರವರೆಗೆ ಚಾಲನೆಯಲ್ಲಿರುತ್ತದೆ ಎಂದು ಕಾರ್ಮಿಕ ಕಲ್ಯಾಣ ಇಲಾಖೆ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News