ಬೆಂಕಿ ಅಕಸ್ಮಿಕ: ಮಹಿಳೆ ಮೃತ್ಯು

Update: 2019-05-23 17:07 GMT

ಬೈಂದೂರು, ಮೇ 23: ಬೆಂಕಿ ಅಕಸ್ಮಿಕದಿಂದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಮೇ 22ರಂದು ಬೆಳಗ್ಗೆ ಬೈಂದೂರು ಮಯ್ಯೆಡಿ ಎಂಬಲ್ಲಿ ನಡೆದಿದೆ.

ಮೃತರನ್ನು ಮಯ್ಯಡಿ ನಿವಾಸಿ ಸುಬ್ರಾಯ ಶೇರುಗಾರ ಎಂಬವರ ಮಗಳು ವಸಂತಿ (40) ಎಂದು ಗುರುತಿಸಲಾಗಿದೆ.

ಇವರು ಮನೆಯ ಪಕ್ಕದಲ್ಲಿರುವ ತರಗೆಲೆಯ ರಾಶಿಯ ಬಳಿ ಬೀಡಿ ಸೇವಿಸಿ ಬಿಸಾಕಿದ ಪರಿಣಾಮ ತರಗೆಲೆಯ ರಾಶಿಗೆ ಬೆಂಕಿ ಹತ್ತಿದ್ದು, ಈ ಬೆಂಕಿ ಆಕಸ್ಮಿಕವಾಗಿ ವಸಂತಿಯವರಿಗೆ ತಗಲಿತ್ತೆನ್ನ ಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಕುಂದಾಪುರ ಸರಕಾರಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News