ಹೆಬ್ರಿ ಬಂಟರ ಸಂಘದಿಂದ ಸಹಾಯಧನ ವಿತರಣೆ

Update: 2019-05-24 14:50 GMT

ಹೆಬ್ರಿ, ಮೇ 24: ಹೆಬ್ರಿ ಅಜೆಕಾರು ವಲಯದ ಬಂಟರ ಯಾನೆ ನಾಡವರ ಸಂಘದ ಆಶ್ರಯದಲ್ಲಿ ಪ್ರತಿ ತಿಂಗಳು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನೀಡುವ 50 ಸಾವಿರ ಸಹಾಯಧನವನ್ನು ಇತ್ತೀಚೆಗೆ ಹೆಬ್ರಿ ಶ್ರೀಮತಿ ಶೀಲಾ ಸುಬೋಧ ಬಲ್ಲಾಳ್ ಬಂಟರ ಭವನದಲ್ಲಿ ಲಾನುಭವಿ ಗಳಿಗೆ ವಿತರಿಸಲಾಯಿತು.

ಹೆಬ್ರಿ ಅಜೆಕಾರು ವಲಯ ಬಂಟರ ಸಂಘದ ಅಧ್ಯಕ್ಷ ಉದಯ ಶೆಟ್ಟಿ ಮುನಿಯಾಲು ಮಾತನಾಡಿ, ಕಳೆದ 18 ತಿಂಗಳಿಂದ ಪ್ರತಿ 2ನೆ ಶನಿವಾರ ಹೆಬ್ರಿ ಬಂಟರ ಸಂಘದಲ್ಲಿ ಧಾರ್ಮಿಕ ಕಾರ್ಯಕ್ರಮವನ್ನು ನಡೆಸುತ್ತಿದ್ದು ಅದರ ಜತೆಗೆ ಅಸಕ್ತರಿಗೆ ಸಹಾಯ ಹಸ್ತ ಚಾಚುವ ನಿಟ್ಟಿನಲ್ಲಿ ಟ್ರಸ್ಟ್‌ನಿಂದ ಎಲ್ಲ ಸಮಾಜದ ಬಡ ವಿದ್ಯಾರ್ಥಿಗಳಿಗೆ ಸಹಾಯಧನವನ್ನು ವಿತರಿಸಲಾಗುತ್ತಿದೆ ಎಂದರು.

ಸಭೆಯಲ್ಲಿ ಸಂಘದ ಗೌರವಾಧ್ಯಕ್ಷ ರಮಾನಂದ ಹೆಗ್ಡೆ, ಉಪಾಧ್ಯಕ್ಷ ಹರ್ಷ ಶೆಟ್ಟಿ, ನಿರ್ಮಾಲ ಎಸ್.ಹೆಗ್ಡೆ, ಮಾತೃಸಂಘದ ನಿರ್ದೇಶಕ ಬಿ.ಕರುಣಾಕರ ಶೆಟ್ಟಿ, ರಾಜಗೋಪಾಲ ಹೆಗ್ಡೆ, ಸೂರ್ಯಣ್ಣ ಶೆಟ್ಟಿ, ಸುಧಾಕರ ಶೆಟ್ಟಿ ದೇವಳಬೈಲು, ಮಾಹಿಳಾ ಬಂಟರ ಸಂಘದ ಕಾರ್ಯದರ್ಶಿ ಜ್ಯೋತಿ ಕೆ.ಶೆಟ್ಟಿ, ಉಮೇಶ್ ಶೆಟ್ಟಿ ಮುನಿಯಾಲು, ಸುಮಿಲ ಯು.ಶೆಟ್ಟಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಬೆಂಗಳೂರು ಬಂಟರ ಸಂಘದಿಂದ ಕೊಡಮಾಡಿದ ಕರಿಮಣಿಯನ್ನು ಲಾನುಭವಿಗೆ ವಿತರಿಸಲಾಯಿತು. ಸಂಘದ ಪ್ರಧಾನ ಕಾರ್ಯದರ್ಶಿ ಸೀತಾನದಿ ವಿಠ್ಠಲ ಶೆಟ್ಟಿ ಸ್ವಾಗತಿಸಿದರು. ನವೀನ್ ಅಡ್ಯಂತಾಯ ವಂದಿಸಿದರು. ಬಳಿಕ ಸಂಘದ ಸದಸ್ಯರಿಂದ ಭಜನೆ, ಸತ್ಯನಾರಾಯಣ ಪೂಜೆ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News