ಸೋಲಿನಿಂದ ಕುಗ್ಗುವುದು ಬೇಡ: ಸಚಿವೆ ಜಯಮಾಲ

Update: 2019-05-25 15:42 GMT

ಉಡುಪಿ, ಮೇ 25: ಚುನಾವಣೆಯ ಫಲಿತಾಂಶದಲ್ಲಿ ಸೋಲು-ಗೆಲುವು ಸಹಜ. ಇದರಿಂದ ಕುಗ್ಗುವುದು ಬೇಡ.ನಮ್ಮ ಸಂಘಟಿತ ಬಲವರ್ಧನೆಗೆ ನಾವು ಮತ್ತಷ್ಟು ಹೆಚ್ಚಿನ ಪರಿಶ್ರಮದಿಂದ ಸಾಮೂಹಿಕ ಪ್ರಯತ್ನ ನಡೆಸಬೇಕು. ಜನತೆ ಹಿತರಕ್ಷಣೆಗೆ ಇನ್ನಷ್ಟು ಸ್ಪಂದಿಸಿ ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅವರ ವಿಶ್ವಾಸ ಗಳಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲ ಹೇಳಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಮೈತ್ರಿ ಕೂಟದ ಅಭ್ಯರ್ಥಿಯ ಪರ ಸುಮಾರು ಎರಡು ತಿಂಗಳುಗಳ ಕಾಲ ಹಗಲಿ ರುಳೆನ್ನದೆ ದುಡಿದ ಹಾಗೂ ಶ್ರಮಿಸಿದ ಕಾಂಗ್ರೆಸ್, ಜೆಡಿಎಸ್ ಪಕ್ಷದ ಮುಖಂಡರು, ಉಭಯ ಪಕ್ಷಗಳ ಕಾರ್ಯಕರ್ತರು ಸೇರಿದಂತೆ ಎಲ್ಲರಿಗೂ ಕೃತಜ್ಞತೆಗಳು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News