ಕುಕ್ಕಿಕಟ್ಟೆ ಭೋಜರಾವ್ ನಿಧನ
Update: 2019-05-25 15:55 GMT
ಉಡುಪಿ : 76 ಬಡಗಬೆಟ್ಟಿನ ಕುಕ್ಕಿಕಟ್ಟೆ ನಿವಾಸಿ ಕೆ.ಭೋಜ ರಾವ್ ಇಂದಿಲ್ಲಿ ನಿಧನರಾದರು. ಅವರಿಗೆ 78 ವರ್ಷ ಪ್ರಾಯವಾಗಿತ್ತು. ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಕುಂದಾಪುರ, ಉಡುಪಿ ಮುಂತಾದ ಕಡೆ ಸಾರಿಗೆ ನಿಯಂತ್ರಣಾಧಿಕಾರಿಯಾಗಿ ಸುಮಾರು 30ವರ್ಷ ಕಾಲ ಸಲ್ಲಿಸಿದ್ದ ಅವರು ಜನಾನುರಾಗಿ ಆಗಿದ್ದರು.
ಸ್ಥಾನಿಕ ಬ್ರಾಹ್ಮಣ ಸಭಾದ ಪ್ರಮುಖರಲ್ಲಿ ಒಬ್ಬರಾಗಿದ್ದ ಅವರು ತಮ್ಮ ಸಮಾಜದ ಮುಖವಾಣಿಯಂತಿದ್ದ ‘ಸುಲಗ್ನ’ ಮಾಸಪತ್ರಿಕೆಯ ಸಂಪಾದಕ ರಾಗಿ ಸೇವೆ ಸಲ್ಲಿಸುತ್ತಿದ್ದರು. ಮೃತರು ಪತ್ನಿ ಶರ್ವಾಣಿ, ಕಾರವಾರ ಪುರಸಭೆಯಲ್ಲಿ ಅಭಿಯಂತರರಾಗಿರುವ ಪುತ್ರ ಅರವಿಂದ ಅವರನ್ನು ಅಗಲಿದ್ದಾರೆ.