ಪ್ರಾಕೃತಿಕ ವಿಕೋಪ ನೋಡಲ್ ಅಧಿಕಾರಿಗಳ ನೇಮಕ

Update: 2019-05-25 16:04 GMT

ಮಂಗಳೂರು, ಮೇ 25: ಪ್ರಾಕೃತಿಕ ವಿಕೋಪ ವೇಳೆ ತುರ್ತು ಪರಿಸ್ಥಿತಿಯ ನಿಭಾಯಿಸಲು ನೋಡಲ್ ಅಧಿಕಾರಿಗಳನ್ನು ನೇಮಿಸಿ ಜಿಲ್ಲಾಧಿಕಾರಿ ಎಸ್.ಸಸಿಕಾಂತ್ ಸೆಂಥಿಲ್ ಆದೇಶ ಹೊರಡಿಸಿದ್ದಾರೆ.

ರಾಜ್ಯದಲ್ಲಿ ಮುಂಗಾರು ಮಳೆಗಾಲ ಆರಂಭವಾಗುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಲವು ಮುಂಜಾಗ್ರತಾ ಕ್ರಮಗಳನ್ನು ಈಗಾಗಲೇ ಕೈಗೊಂಡಿದೆ. ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಈ ಹಿಂದಿನ ವರ್ಷಗಳಲ್ಲಿ ಸಂಭವಿಸಿದ ಅನಾಹುತಗಳನ್ನು ಗಮನದಲ್ಲಿರಿಸಿ ಪ್ರತೀ ಪ್ರದೇಶಗಳನ್ನು ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸದ್ದಾರೆ.

ಜಿಲ್ಲಾ ಪ್ರಾಕೃತಿಕ ವಿಕೋಪ ನಿರ್ವಹಣಾ ಪ್ರಾಧಿಕಾರದ ಮುಖ್ಯಸ್ಥರಾಗಿ ಜಿಲ್ಲಾಧಿಕಾರಿ, ಕಾರ್ಯಾಧ್ಯಕ್ಷರಾಗಿ ಅಪರ ಜಿಲ್ಲಾಧಿಕಾರಿ, ಯೋಜನಾ ವಿಭಾಗದ ಮುಖ್ಯಸ್ಥರಾಗಿ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರು, ಲಾಜಿಸ್ಟಿಕ್ ವಿಭಾಗದ ಮುಖ್ಯಸ್ಥರಾಗಿ ಆರ್‌ಟಿಒ, ಎಕ್ಸಿಕ್ಯೂಟಿವ್ ಇಂಜಿನಿಯರ್ ಪಿ.ಡಬ್ಲೂಡಿ, ಎಂಸಿಸಿ ಸೂಪರಿಟೆಂಡೆಂಟ್ ಇಂಜಿನಿಯರ್, ರಕ್ಷಣಾ ಅಧಿಕಾರಿಗಳಾಗಿ ಹೆಚ್ಚುವರಿ ಎಸ್ಪಿ, ಇಬ್ಬರು ಡಿಸಿಪಿಗಳು, ಮುಖ್ಯ ಅಗ್ನಿಶಾಮಕ ಅಧಿಕಾರಿ ಗಳು ಕಾರ್ಯನಿರ್ವಹಿಸಲಿದ್ದಾರೆ.

ನೋಡಲ್ ಅಧಿಕಾರಿಗಳು: ಗಾಯತ್ರಿ ನಾಯಕ್, ಉಪ ಆಯುಕ್ತರು, ಮನಪಾ -9448259312, ಬಂಟ್ವಾಳ ರವಿಚಂದ್ರ ನಾಯಕ್ ಎಸಿ - 9916821123, ಬೆಳ್ತಂಗಡಿ ಎಸ್.ಸಿ. ಮಹೇಶ್ ಉಪಕಾರ್ಯದರ್ಶಿ ಜಿಪಂ ಮಂಗಳೂರು- 9480862001, ಪುತ್ತೂರು ಕೃಷ್ಣಮೂರ್ತಿ ಎಸಿ - 94823826262, ಸುಳ್ಯ ಎಸ್.ಮೋಹನ್ ಉಪನಿರ್ದೇಶಕರು ಪಶುಸಂಗೋಪನ ಇಲಾಖೆ -9845766287, ಮೂಡುಬಿದಿರೆ, ಉದಯಶೆಟ್ಟಿ ಸ.ನಿ ಪ್ರವಾಸೋದ್ಯಮ-9480044615, ಕಡಬ ರವಿಚಂದ್ರ ಪೂಜಾರ್ ಜಿಲ್ಲಾ ನೋಂದಣಾಧಿಕಾರಿ- 8123629511, ಮುಲ್ಕಿ ಪ್ರದೀಪ್ ಡಿಸೋಜ ಕಾರ್ಯದರ್ಶಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರ- 9980146144.

ಪ್ರವಾಹ ಪೀಡಿತ ಮತ್ತು ತಗ್ಗುಪ್ರದೇಶಗಳ ನೋಡಲ್ ಅದಿಕಾರಿಗಳು- ಕಲ್ಲಾಪು, ಪೆರ್ಮ್ಮನ್ನೂರು, ಜಪಿನಮೊಗರು - ಲಿಂಗೇಗೌಡ, ಇಇ ಮನಾಪ- 9449555511, ಕೊಟ್ಟಾರ ಚೌಕಿ - ಪ್ರತಾಪ್ ಸ.ನಿ. ಕೈಗಾರಿಕೆ ಇಲಾಖೆ ಅಧಿಕಾರಿ 8105733519, ಅದ್ಯಪಾಡಿ, ಮಳವೂರು, ಬಜ್ಪೆ ಎ.ರಘು ಇಒ ತಾಪಂ- 9480862110, ಆನೆಗುಂಡಿ, ಅಳಕೆ, ಬಿಜೈ ಮಧು ಪರಿಸರ ಅಭಿಯಂತರರು -9448696487, ಬಂಟ್ವಾಳದ ಪಾಣೆ ಮಂಗಳೂರು, ಆಲಡ್ಕ- ಮೇಬಲ್ ಡಿಸೋಜ ಮುಖ್ಯಾಧಿಕಾರಿ ಟಿಎಂಸಿ ಬಂಟ್ವಾಳ 9844061671, ಜಕ್ರಿಬೆಟ್ಟು, ಬಸ್ತಿ ಪಡ್ಪು-ಇಒ ತಾಪಂ ಬಂಟ್ವಾಳ-9480862105, ಸರಪಾಡಿ, ನಾವೂರು-ಸಮಾಜಕಲ್ಯಾಣ ಉ.ನಿ, -9480843112, ಬೆಳ್ತಂಗಡಿ ಶಿಶಿಲ ಸಿ.ಆರ್. ನರೇಂದ್ರ ಸ.ಕಾ.ಅ.-9480862103, ಚಾರ್ಮಾಡಿ ಜಯರಾಮ್ ಕಾ.ನಿ.ತಾಪಂ ಬೆಳ್ತಂಗಡಿ-9480862100, ವೇಣೂರು ಶಿವಪ್ರಸಾದ್ ಲೋಕೋಪಯೋಗಿ ಇಲಾಖೆ ಬೆಳ್ತಂಗಡಿ-9448135223, ಪುತ್ತೂರಿನ ಉಪ್ಪಿನಂಗಡಿ, ಹೊಸಮಠ, ಶಿರಾಡಿ, ಬಾಳ್ತಿಲ, ಉದ್ಯಾನ ಪ್ರದೇಶಗಳಿಗೆ ಜಗದೀಶ್ ಎಸ್. ಕಾ.ನಿ.ತಾಪಂಪುತ್ತೂರು- 9480862115, ಸುಳ್ಯದ ಸುಬ್ರಮಣ್ಯಕ್ಕೆ ಮಧುಕುಮಾರ್ ಕಾ.ನಿ.ತಾಪಂ ಸುಳ್ಯ-9480862120, ಕಡಬದ ಹೊಸಮಠ, ನೂಜಿ, ಕುಂತೂರು, ಪೆರಾಬೆ, ಅಲಂಗಾರು, ಬೆಳಿನೆಲೆ, ತಾರನಾಥ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಪುತ್ತೂರು- 9008967155, ಮೂಡುಬಿದಿರೆ ವಾಲ್ಪಾಡಿ- ಮೂಡುಕೊಣಾಜೆ- ಕೀರ್ತಿಕುಮಾರ್ ಪರಿಸರ ಅಧಿಕಾರಿ- 9448268171, ಮುಲ್ಕಿ ಗೋಪಾಲಕೃಷ್ಣ ಮುಖ್ಯಾಧಿಕಾರಿ ಪಪಂ-9845150379 ಅವರನ್ನು ನೇಮಿಸಲಾಗಿದೆ.

ದ.ಕ. ಜಿಲ್ಲಾಧಿಕಾರಿ ಕಂಟ್ರೋಲ್ ರೂಂ 1077 (0824- 2442590) ವಾಟ್ಸ್‌ಆ್ಯಪ್ ನಂ. 9483908000ನ್ನು ಸಂಪರ್ಕಿಸಲು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News