​ಮೇ 30: ಸಾರ್ವಜನಿಕ ಸಮಾಲೋಚನಾ ಕಾರ್ಯಾಗಾರ

Update: 2019-05-27 12:45 GMT

ಮಂಗಳೂರು, ಮೇ 27: ಎಡಿಬಿ ನೆರವಿನೊಂದಿಗೆ ಮಂಗಳೂರು ನಗರಕ್ಕೆ ಕ್ವಿಮಿಪ್ ಟ್ರಾಂಚ್-2ರಡಿಯಲ್ಲಿ ಒಳಚರಂಡಿ ಯೋಜನೆಗಳ ಕುರಿತು ಮೇ 30ರಂದು ಪೂರ್ವಾಹ್ನ 10 ಗಂಟೆಗೆ ವಾರ್ಡ್ ನಂ 26ರ ವಾರ್ಡ್ ಮಟ್ಟದ ಸಾರ್ವಜನಿಕ ಸಮಾಲೋಚನಾ ಸಭೆಯನ್ನು ಅಶೋಕನಗರ ದೈವಜ್ಞ ಕಲ್ಯಾಣ ಮಂಟಪದ ಹತ್ತಿರ ಆಯೋಜಿಸಲಾಗಿದೆ.

ಅಪರಾಹ್ನ 4 ಗಂಟೆಗೆ ವಾರ್ಡ್ ನಂ.27 ಮತ್ತು 28ರ ವಾರ್ಡ್ ಮಟ್ಟದ ಸಾರ್ವಜನಿಕ ಸಮಾಲೋಚನಾ ಸಭೆಯನ್ನು ಬೊಕ್ಕಪಟ್ಟಣದಲ್ಲಿ ಕೆಯುಐಡಿಎಫ್‌ಸಿ ಹಾಗೂ ಮಂಗಳೂರು ಮಹಾನಗರ ಪಾಲಿಕೆ ಸಹಯೋಗದಿಂದ ಆಯೋಜಿಸಲಾಗಿದೆ ಎಂದು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News