ಮೋದಿ ಅಭಿಮಾನಿಯಿಂದ ಗ್ರಾಹಕರಿಗೆ ಉಚಿತ ಕ್ಷೌರ

Update: 2019-05-29 17:16 GMT

ಬೈಂದೂರು, ಮೇ 29: ನರೇಂದ್ರ ಮೋದಿ ಅಭಿಮಾನಿಯಾಗಿರುವ ಉಪ್ಪುಂದದ ಕ್ಷೌರಿಕ ನಯನ್ ಕುಮಾರ್(32) ಮೇ 30ರಂದು ನಡೆಯುವ ಪ್ರಧಾನಿ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ತನ್ನ ಗ್ರಾಹಕರಿಗೆ ಉಚಿತ ಕ್ಷೌರ ಮಾಡುವ ಮೂಲಕ ಆಚರಿಸಲಿದ್ದಾರೆ.

ಕಳೆದ 12 ವರ್ಷಗಳಿಂದ ಕ್ಷೌರಿಕನಾಗಿ ಕೆಲಸ ಮಾಡುತ್ತಿರುವ ನಯನ್ ಕುಮಾರ್, ಉಪ್ಪುಂದ ದೇವಾಲಯದ ಸಮೀಪ ಸ್ವಂತ ಕ್ಷೌರ ಅಂಗಡಿಯನ್ನು ನಡೆಸುತ್ತಿದ್ದಾರೆ. ಮನೆಯಲ್ಲಿ ಕೃಷಿ ಕೆಲಸ ಮಾಡುವ ಇರು, ವೃತ್ತಿಯಲ್ಲಿ ಕ್ಷೌರಿಕರಾಗಿದ್ದಾರೆ.

‘ನಾನು ಬಿಜೆಪಿ ಕಾರ್ಯಕರ್ತನಲ್ಲದಿದ್ದರೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆ ಗಳಿಂದ ಪ್ರಭಾವಕ್ಕೆ ಒಳಗಾಗಿ ಈ ಸೇವೆ ನೀಡಲು ನಿರ್ಧರಿಸಿದ್ದೇನೆ. ಮೋದಿ ಪ್ರಧಾನಿ ಯಾಗಿ ಎರಡನೆ ಬಾರಿಗೆ ಪ್ರಮಾಣ ಸ್ವೀಕರಿಸುವ ಮೇ 30ರ ಬೆಳಗ್ಗೆ 7:30 ರಿಂದ ಸಂಜೆ 7ಗಂಟೆಯವರೆಗೆ ನನ್ನ ಅಂಗಡಿಗೆ ಬರುವ ಎಲ್ಲ ಗ್ರಾಹಕರಿಗೂ ಉಚಿತ ಕ್ಷೌರ ಮಾಡಲಾಗುವುದು ಎಂದು ನಯನ್ ಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News