×
Ad

ಜೂಜಾಟ: 15 ಮಂದಿ ಆರೋಪಿಗಳು ಸೆರೆ

Update: 2019-05-31 18:17 IST

ಬಂಟ್ವಾಳ, ಮೇ 31: ಜುಗಾರಿ ಆಡ್ಡೆಗೆ ದಾಳಿ ನಡೆಸಿದ ಬಂಟ್ವಾಳ ಗ್ರಾಮಾಂತರ ಪೊಲೀಸರು ಜೂಜಾಟದಲ್ಲಿ ನಿರತರಾಗಿದ್ದ 15 ಮಂದಿಯನ್ನು ವಶಕ್ಕೆಪಡೆದು, ನಗದು ಸಹಿತ ಇತರ ವಸ್ತುಗಳನ್ನು ವಶಕ್ಕೆ ಪಡೆದುಕೊಂಡ ಘಟನೆ ತುಂಬೆ ಗ್ರಾಮದದಲ್ಲಿ ನಡೆದಿದೆ.

ತುಂಬೆ ಗ್ರಾಮದ ನೇತ್ರಾವತಿ ನದಿಯ ಬದಿಯಲ್ಲಿ ಜೂಜಾಟದಲ್ಲಿ ತೊಡಗಿದ್ದ ಮುಹಮ್ಮದ್ ಮುಸ್ತಾಫಾ, ನಝೀರ್, ಕಿಶೋರ್, ಮುಹಮ್ಮದ್ ಶರೀಫ್, ನಿತ್ಯಾನಂದ, ರಮೇಶ್, ಅಮಿತ್ ಶೆಟ್ಟಿ, ರಾಮಚಂದ್ರ, ಸಂತೋಷ್ ಕುಮಾರ್, ಧೀರಜ್, ಸುಜಯ್, ನಾಗೇಶ್, ರೋಷನ್ ವೇಗಸ್, ಹೇಮಚಂದ್ರ ಹಾಗೂ ಚೇತನ್ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ದಾಳಿಯಲ್ಲಿ 38 ಸಾವಿರ ರೂ. ಹಾಗು ಇತರ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಈ ಸಂಬಂಧ ಬಂಟ್ವಾಳ ಗ್ರಾಮಾಂತರ  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News