ನೀರಿನ ರೇಶನಿಂಗ್: ಈದುಲ್ ಫಿತ್ರ್ಗೆ ವ್ಯವಸ್ಥೆ ಕಲ್ಪಿಸಲು ಆಗ್ರಹ
Update: 2019-06-01 18:04 IST
ಮಂಗಳೂರು, ಜೂ.1: ದ.ಕ.ಜಿಲ್ಲಾದ್ಯಂತ ಎರಡು ತಿಂಗಳಿನಿಂದ ಉದ್ಭವಿಸಿದ ನೀರಿನ ಸಮಸ್ಯೆಯ ಪರಿಹಾರಕ್ಕಾಗಿ ರೂಪಿಸಲಾದ ರೇಶನಿಂಗ್ ವ್ಯವಸ್ಥೆಯಲ್ಲಿ ಮಾರ್ಪಾಟು ಮಾಡಲು ಎಸ್ಡಿಪಿಐ ಆಗ್ರಹಿಸಿದೆ.
ಮುಸಲ್ಮಾನರು ರಮಝಾನ್ ಉಪವಾಸ ಆಚರಿಸಿ ಇದೀಗ ಈದುಲ್ ಫಿತ್ರ್ ಹಬ್ಬಕ್ಕೆ ಸನ್ನದ್ಧರಾಗಿದ್ದು, ವಾರಕ್ಕೆ ಎರಡು ಸಲ ನೀರು ಸರಬರಾಜು ಆಗುವುದರಿಂದ ಹಬ್ಬಕ್ಕೆ ತುಂಬಾ ಸಮಸ್ಯೆಗಳಾಗುವ ಸಾದ್ಯತೆ ಇದೆ. ಆದುದರಿಂದ ಜೂನ್ 1ರಿಂದ ಅನ್ವಯವಾಗುವಂತೆ ಹಬ್ಬ ಮುಗಿಯುವ ತನಕ ನಿರಂತರವಾಗಿ ದಿನನಿತ್ಯ ನೀರು ಸರಬರಾಜು ಮಾಡಿ ಹಬ್ಬಕ್ಕೆ ಯಾವುದೇ ಸಮಸ್ಯೆಗಳು ಆಗದಂತೆ ನೋಡಿ ಕೊಳ್ಳಬೇಕೆಂದು ಎಸ್ಡಿಪಿಐ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಒತ್ತಾಯಿಸಿದ್ದಾರೆ.