ಸುಬ್ರಹ್ಮಣ್ಯದಲ್ಲಿ ಅರ್ಚಕನ ಮೇಲೆ ತಂಡದಿಂದ ಹಲ್ಲೆ: ಆರೋಪ

Update: 2019-06-02 05:27 GMT

ಸುಬ್ರಹ್ಮಣ್ಯ: ಕುಕ್ಕೇ ಸುಬ್ರಹ್ಮಣ್ಯ ಆಡಳಿತ ಮಂಡಳಿ ಕಚೇರಿಯಲ್ಲಿ ಮಠದ ಅರ್ಚಕನ ಮೇಲೆ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ.

ಕುಮಾರ್ ಬನ್ನಿಂತಾಯ (61) ಹಲ್ಲೆಗೊಳಗಾದ ಅರ್ಚಕ ಎಂದು ತಿಳಿದುಬಂದಿದೆ. ಅವರು ಐದು ವರ್ಷಗಳಿಂದ ಮಠದಲ್ಲಿ ಅರ್ಚಕರಾಗಿದ್ದರು.

ಶನಿವಾರ ಸಂಜೆ ಘಟನೆ ನಡೆದಿದ್ದು, ಗಾಯಾಳು ಅರ್ಚಕನನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅರ್ಚಕನಿಗೆ ಹಲ್ಲೆಗೈದವರನ್ನು ಗುರುಪ್ರಸಾದ್ ಪಂಜ, ಪ್ರಶಾಂತ್ ಮಾಣಿಲ, ಮಹೇಶ್ ಕರಿಕಳ ಎಂದು ಗುರುತಿಸಲಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದುಬರಬೇಕಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News