ರಮಝಾನ್ ನೀಡಿದ ಪಾವಿತ್ರತೆ ಉಳಿಸಿಕೊಂಡು ಹಬ್ಬ ಆಚರಿಸಲು ಕೂರತ್ ತಂಙಳ್ ಕರೆ
Update: 2019-06-04 16:18 IST
ಮಂಗಳೂರು: ರಮಝಾನ್ ತಿಂಗಳ ವೃತಾಚರಣೆ ಮುಗಿದು ವಿಶ್ವಾಸಿ ಸಮುದಾಯವು ಪವಿತ್ರ ಈದುಲ್ ಫಿತ್ರ್ ಹಬ್ಬಕ್ಕೆ ತೆರಳುತಿದ್ದು ರಮಝಾನ್ ತಿಂಗಳಲ್ಲಿ ನಡೆಸಿದ ಆತ್ಮಶುದ್ಧಿ ಮತ್ತು ಪವಿತ್ರತೆ ಸಂದೇಶಗಳನ್ನು ಸಮಾಜದಲ್ಲಿ ಹರಡುವಂತಾಗಬೇಕೆಂದು ಉಳ್ಳಾಲ ಖಾಝಿ ಖುರ್ರತ್ತುಸ್ಸಾದಾತ್ ಸಯ್ಯಿದ್ ಫಝಲ್ ಕೋಯಮ್ಮ ತಂಙಲ್ ಮದನಿ ಅಲ್ ಬುಖಾರಿ ಕೂರತ್ ಕರೆ ನೀಡಿದ್ದಾರೆ.
ಸಮಾಜದ ಎಲ್ಲ ವರ್ಗದ ಜನರ ಮಧ್ಯೆ ಶಾಂತಿ ಮತ್ತು ಸಾಮರಸ್ಯ ಖಾತರಿ ಪಡಿಸಲು ಈದ್ ದಿನವು ಕಾರಣವಾಗ ಬೇಕೆಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.