ಎಸ್‌ಡಿಎಂ ಆಸ್ಪತ್ರೆ ಕುತ್ಪಾಡಿಯಲ್ಲಿ ಇನ್‌ಫರ್ಟಿಲಿಟಿ ಕ್ಲಿನಿಕ್ ಪ್ರಾರಂಭ

Update: 2019-06-04 15:57 GMT

ಉದ್ಯಾವರ, ಜೂ.4: ಕುತ್ಪಾಡಿಯ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆಯಲ್ಲಿ ರಸಾಯನ ಮತ್ತು ವಾಜೀಕರಣ ವಿಭಾಗದ ವತಿಯಿಂದ ‘ಇನ್‌ಫರ್ಟಿಲಿಟಿ ಕ್ಲಿನಿಕ್’ ಜೂ.8ರಂದು ಪ್ರಾರಂಭಗೊಳ್ಳಲಿದೆ.

ಎಸ್‌ಡಿಎಂ ಎಜ್ಯುಕೇಶನಲ್ ಸೊಸೈಟಿ ಉಜಿರೆ ಇದರ ಅಧ್ಯಕ್ಷರಾದ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರು ಜೂ.8ರ ಬೆಳಗ್ಗೆ 9:30ಕ್ಕೆ ಕ್ಲಿನಿಕ್‌ನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸೊಸೈಟಿಯ ಕಾರ್ಯದರ್ಶಿ ಪ್ರೊ. ಬಿ.ಯಶೋವರ್ಮ, ಹೊಸದಿಲ್ಲಿಯ ಸೆಂಟ್ರಲ್ ಕೌನ್ಸಿಲ್ ಫಾರ್ ರಿಸರ್ಚ್ ಇನ್ ಆಯುರ್ವೇದ ಸಾಯನ್ಸ್‌ನ ಮಹಾ ನಿರ್ದೇಶಕ ಪ್ರೊ.ವೈದ್ಯ ಕರ್ತಾರ್ ಸಿಂಗ್ ಧೀಮನ್ ಭಾಗವಹಿಸಲಿದ್ದಾರೆ ಎಂದು ಎಸ್‌ಡಿಎಂ ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News