ಮುದ್ದೂರು: ವ್ಯಕ್ತಿಯ ಅನುಮಾನಾಸ್ಪದ ಮೃತ್ಯು

Update: 2019-06-04 16:06 GMT

ಹೆಬ್ರಿ, ಜೂ.4: ನಾಲ್ಕೂರು ಗ್ರಾಮದ ಮುದ್ದೂರು ಅರ್ಬಿ ಎಂಬಲ್ಲಿ ವ್ಯಕ್ತಿಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತರನ್ನು ಅರ್ಬಿ ನಿವಾಸಿ ಚಂದ್ರ ನಾಯ್ಕ(45) ಎಂದು ಗುರುತಿಸಲಾಗಿದೆ. ಇವರು ಮೇ 29ರಂದು ರಾತ್ರಿ ಮನೆಯಿಂದ ಹೋದವರು ನಾಪತ್ತೆಯಾಗಿ ದ್ದರು. ಜೂ.4ರಂದು ಬೆಳಗ್ಗೆ 8ಗಂಟೆಗೆ ಇವರ ಮೃತದೇಹ ಮನೆಯ ಸಮೀಪದ ವೀರಣ್ಣ ಶೆಟ್ಟಿ ಎಂಬವರ ಹಾಡಿಯಲ್ಲಿರುವ ಶಿಲೆಕಲ್ಲಿನ ಬಳಿಯಲ್ಲಿ ಅಂಗಾತನೆ ಬಿದ್ದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಮೃತದೇಹವು ಸಂಪೂರ್ಣ ಕೊಳೆತು ಹೋಗಿದ್ದು, ಮೃತದೇಹದ ಬದಿಯಲ್ಲಿ ಒಂದು ಸ್ಟೀಲ್ ಲೋಟ ಹಾಗೂ ಒಂದು ನೀರಿನ ಬಾಟಲಿ ಕಂಡುಬಂದಿದೆ. ಮೃತದೇಹವು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿದೆ. ಮೃತರು ಸ್ವಂತ ಟೆಂಪೋ ಇರಿಸಿಕೊಂಡು ದುಡಿಮೆ ಮಾಡಿಕೊಂಡಿದ್ದು, ಟೆಂಪೋ ಖರೀದಿಸಲು ಬ್ಯಾಂಕ್ ನಲ್ಲಿ ಸಾಲ ಮಾಡಿದ್ದರು. ಇತ್ತೀಚೆಗೆ ಟೆಂಪೋದಲ್ಲಿ ದುಡಿಮೆ ಕಡಿಮೆಯಾದ ಕಾರಣ ಸಾಲವ್ನು ತೀರಿಸಲು ಆಗಿರಲಿಲ್ಲ ಎನ್ನಲಾಗಿದೆ.

ಅಂಕ್ರಾಲು ನಿವಾಸಿ ಪ್ರಕಾಶ ಮದ್ಯಸ್ಥ ಹಾಗೂ ಮೃತ ಚಂದ್ರ ನಾಯ್ಕರಿಗೆ ಜಾಗದ ವಿಚಾರದಲ್ಲಿ ತಕರಾರು ಇದ್ದು, ಇದು ನ್ಯಾಯಾಲಯದಲ್ಲಿ ವಿಚಾರಣೆ ಯಲ್ಲಿದೆ. ಆದುದರಿಂದ ಮೃತರ ಮರಣದ ಬಗ್ಗೆ ಪ್ರಕಾಶ ಮದ್ಯಸ್ಥ ಮೇಲೆ ಸಂದೇಹವಿರುವುದಾಗಿ ಮೃತರ ಮಗ ವಿಶ್ವನಾಥ್ ನಾಯ್ಕ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News