ಮನೆಗೆ ನುಗ್ಗಿ ಚಿನ್ನಾಭರಣ ಕಳವು

Update: 2019-06-10 16:15 GMT

ಶಿರ್ವ, ಜೂ.10: ಕಳತ್ತೂರು ಗ್ರಾಮದ ಪಡು ಕಲ್ಲಂದ್ ಎಂಬಲ್ಲಿರುವ ಮನೆಯೊಂದಕ್ಕೆ ಜೂ .3ರ ಸಂಜೆಯಿಂದ ಜೂ.9ರ ಬೆಳಗಿನ ಮಧ್ಯಾವಧಿಯಲ್ಲಿ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವುಗೈದಿರುವ ಬಗ್ಗೆ ವರದಿಯಾಗಿದೆ.

ಯೋಗೀಶ್ ಆಚಾರ್ಯ ಎಂಬವರ ಮನೆಯ ಹೆಂಚು ತೆಗೆದು ಒಳನುಗ್ಗಿದ ಕಳ್ಳರು, ಬೆಡ್‌ರೂಮಿನ ಕಾಪಾಟಿನಲ್ಲಿದ್ದ 2.75ಲಕ್ಷ ರೂ. ಮೌಲ್ಯದ ಚಿನ್ನದ ನೆಕ್ಲಸ್, ಒಂದು ಜೊತೆ ಚಿನ್ನದ ಲೋಲಕ್, 8 ಚಿನ್ನದ ಬಳೆಗಳು, 2 ಜೊತೆ ಕಿವಿಯ ಚಿನ್ನದ ಓಲೆ, 2 ಉಂಗುರ, ಚಿನ್ನದ ಸಣ್ಣ ಬ್ರಾಸ್ಲೈಟ್, ಚಿನ್ನದ ಜನಿವಾರ, ಚಿನ್ನದ ಪೆಂಡೆಂಟ್ ಸರಗಳನ್ನು ಮತ್ತು 15000 ರೂ. ಮೌಲ್ಯದ ಬೆಳ್ಳಿಯ ಸಾಮಾಗ್ರಿಗಳು ಹಾಗೂ ಮೊಬೈಲ್‌ನ್ನು ಕಳವು ಮಾಡಿರುವುದಾಗಿ ದೂರಲಾಗಿದೆ.

ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News