ಬೆಳ್ತಂಗಡಿ: ಮನೆಗೆ ನುಗ್ಗಿ ನಗ-ನಗದು ಕಳವು

Update: 2019-06-10 17:53 GMT

ಬೆಳ್ತಂಗಡಿ: ತಲಕಿನ ಜಾರಿಗೆ ಬೈಲು ಪರಿಮ ನಿವಾಸಿ ಉಸ್ಮಾನ್ ಎಂಬವರ ಮನೆಗೆ ನುಗ್ಗಿದ ಕಳ್ಳರು ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ಹಣವನ್ನು ದೋಚಿರುವ ಘಟನೆ ಇಂದು ಬೆಳಕಿಗೆ ಬಂದಿದೆ.

ಉಸ್ಮಾನ್ ಅವರ ಕುಟುಂಬ ವಿದೇಶದಲ್ಲಿ ವಾಸವಾಗಿದ್ದು ಇವರ ಮನೆಯ ಮೇಲಿನ ಮಾಳಿಗೆಯಲ್ಲಿ ಅಪ್ಸಾ ಎಂಬವರು ವಾಸವಾಗಿದ್ದರು. ಹಬ್ಬದ ಪ್ರಯುಕ್ತ ಅಪ್ಸಾ ಅವರೂ ಜೂ.4 ರಂದು ಮನೆಗೆ ಬೀಗ ಹಾಕಿ ತಂಗಿ ಮನೆಗೆ ಹೋಗಿದ್ದರು. ಇಂದು ಅವರು ಮನೆಗೆ ಹಿಂತಿರುಗಿ ಬಂದಾಗ ತಮ್ಮ ಮನೆಯ ಬಾಗಿಲು ಒಡೆದು ಒಳ ನುಗ್ಗಿ ಕಳ್ಳತನ ಮಾಡಿರುವುದು ಪತ್ತೆಯಾಗಿದೆ. ಅವರ ಮನೆಯಿಂದ ಸುಮಾರು ಇಪ್ಪತ್ತೆರಡು ಸಾವಿರ ಮೌಲ್ಯದ ಚಿನ್ನಾಭರಣ ಹಾಗೂ ಎರಡು ಸಾವಿರ ರೂ. ಕಳ್ಳತನವಾಗಿದೆ. ಉಸ್ಮಾನ್ ಅವರ ಮನೆಗೂ ನುಗ್ಗಿದ್ದು ಕಳವು ನಡೆಸಿರುವ ಬಗ್ಗೆ ದೂರಲಾಗಿದೆ.

ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News