ಕಂಬಳಬೆಟ್ಟು: ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣೆ ಕಾರ್ಯಕ್ರಮ

Update: 2019-06-11 15:50 GMT

ವಿಟ್ಲ: ಇಲ್ಲಿಗೆ ಸಮೀಪದ ಕಂಬಳಬೆಟ್ಟುವಿನ ದ.ಕ. ಜಿ. ಪಂ. ಉನ್ನತ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿ ಗಳಿಗೆ ಉಚಿತ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಉದ್ಯಮಿ ವಿ.ಕೆ. ಅಬ್ದುಲ್ ಅಝೀಝ್ ಬದ್ರಿಯ ಪ್ರಾಯೋಜಕತ್ವದಲ್ಲಿ ಶಾಲೆಯ ಎಲ್ ಕೆಜಿ ಹಾಗೂ 1ರಿಂದ 8ನೇ ತರಗತಿಯಲ್ಲಿ ಕಲಿಸುತ್ತಿರುವ ಸುಮಾರು 100 ವಿದ್ಯಾರ್ಥಿಗಳಿಗೆ ಬರೆಯುವ ಪುಸ್ತಕ, ಪೆನ್ನು, ಪೆನ್ಸಿಲ್, ಸ್ಕೇಲ್, ವಿತರಿಸಲಾಯಿತು.

ಈ ಸಂದರ್ಭ ವಿಟ್ಲ ಪಡ್ನೂರು ಗ್ರಾಪಂ ಅಧ್ಯಕ್ಷ ಪ್ರೇಮಲತಾ, ಸದಸ್ಯ ಮಹಾಬಲೇಶ್ವರ ಭಟ್, ಸದಸ್ಯ ಹಾಗೂ ಶಾಲಾ ಎಸ್ಡಿಎಂಸಿ ಅಧ್ಯಕ್ಷ  ಅಬ್ದುರ್ರಹ್ಮಾನ್, ಶಾಲಾ ಮುಖ್ಯ ಶಿಕ್ಷಕಿ ವಾರಿಜ, ಎಸ್ಡಿಎಂಸಿ ಸದಸ್ಯರಾದ ಭಾಸ್ಕರ, ಅಶ್ರಫ್ ಹಾಗೂ ಶಾಲಾ ಸಹ ಶಿಕ್ಷಕರು  ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News