ದೇರಳಕಟ್ಟೆ: ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮ

Update: 2019-06-11 15:57 GMT

ಮಂಗಳೂರು: ಗ್ರಾಮೀಣ ಆರೋಗ್ಯ ರಕ್ಷಣೆ ಮತ್ತು ಅಭಿವೃದ್ಧಿ ಕೇಂದ್ರ ಯೆನಪೋಯ ಆಸ್ಪತ್ರೆ  ದೇರಳಕಟ್ಟೆ ಹಾಗೂ ಡ್ರೀಮ್ಸ್ ಇಂಡಿಯಾ ಫೌಂಡೇಶನ್ ಹಳೆಕೋಟೆ ಉಳ್ಳಾಲ ಇದರ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವು ಮಂಗಳವಾರ ಡ್ರೀಮ್ಸ್ ಇಂಡಿಯಾ ಫೌಂಡೇಶನ್ ಹಳೆಕೋಟೆ ಉಳ್ಳಾಲ  ಕಚೇರಿಯಲ್ಲಿ ನಡೆಯಿತು.

ಈ ಸಂದರ್ಭ ಯೆನಪೋಯ ಆಸ್ಪತ್ರೆಯ ವೈದ್ಯರುಗಳಾದ ಡಾ. ತನ್ಸೀಫ್, ಡಾ. ರಹೀಫ್, ಸಮಾಜ ಸೇವಾ ವಿಭಾಗದ ದಿವ್ಯ ಹಾಗೂ ಸಿಬ್ಬಂದಿ ವರ್ಗದವರೂ ಸಂಸ್ಥೆಯ ಪದಾಧಿಕಾರಿಗಳಾದ ಅಬ್ದುಲ್ ರಹೀಮ್, ಸಫ್ವಾನ್ ಅಬ್ಬಾಸ್, ಮೊಹಮ್ಮದ್ ಫೈರೋಝ್, ಹಂಝ, ಮುಝಮ್ಮಿಲ್, ಶರೀಫ್, ಸಮಾಜಸೇವಕ, ಎಸ್ ಡಿ ಪಿ ಐ ಮುಖಂಡ ರವೂಫ್ ಉಳ್ಳಾಲ್, ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಶಬೀರ್ ಹಸನ್, ಸಮಾಜ ಸೇವಕ ಯು.ಎನ್ ಬಶೀರ್ ಭಾಗವಹಿಸಿದರು. ಮನ್ಸೂರ್ ಹಾಗೂ ಮುಸ್ತಾಕ್‌ ಕಾರ್ಯಕ್ರಮಕ್ಕೆ ಸಹಕಾರ ನೀಡಿದರು.

ಪ್ರತೀ ತಿಂಗಳ ಎರಡನೇ ಮಂಗಳವಾರ ನಡೆಯುವ ಆರೋಗ್ಯ ತಪಾಸಣಾ ಶಿಬಿರದ ಪ್ರಯೋಜನವನ್ನು ಪ್ರತಿಯೊಬ್ಬರೂ ಪಡೆಯಬೇಕಾಗಿ ಸಂಸ್ಥೆಯ ಸಂಚಾಲಕರಾದ ಸಫ್ವಾನ್ ಅಬ್ಬಾಸ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News