ಅಕ್ರಮ ಮರ ಸಾಗಾಟ: ವಾಹನ- ಸೊತ್ತು ವಶ

Update: 2019-06-11 16:27 GMT

ಮಂಗಳೂರು, ಜೂ.11: ತಾಲೂಕಿನ ಬಡಗುಳಿಪಾಡಿ ಕೈಕಂಬ ಎನ್‌ಎಚ್-169 ರಸ್ತೆ ಬದಿ ಪರವಾನಿಗೆ ರಹಿತವಾಗಿ ದಿಮ್ಮಿ ಮತ್ತು ಎಳಗಳನ್ನು ಸಾಗಾಟದ ಮಾಡುತ್ತಿದ್ದ ವಾಹನ ಹಾಗೂ ಸೊತ್ತನ್ನು ವಶಕ್ಕೆ ಪಡೆಯಲಾಗಿದೆ.

ಮೂಡುಬಿದಿರೆ ಮಾರೂರು ನಿವಾಸಿ, ವಾಹನ ಚಾಲಕ ಗಣೇಶ್ ಎಂಬಾತನನ್ನು ಬಂಧಿಸಿ, ಮುಚ್ಚಳಿಕೆ ಬರೆಸಿಕೊಂಡು ಬಿಡುಗಡೆ ಮಾಡಲಾಗಿದೆ.

ವಾಹನ ಹಾಗೂ ಸಾಗಾಟ ಮಾಡಿದ 12 ದಿಮ್ಮಿಗಳಿಂದ 1.523 ಘ.ಮೀ ಮೋಪುಗಳನ್ನು ಮತ್ತು 10 ಎಳಗಳನ್ನು ವಶಕ್ಕೆ ಪಡೆಯಲಾಗಿದೆ.
ಮಂಗಳೂರು ವಲಯ ಅರಣ್ಯಾಧಿಕಾರಿ ಪಿ.ಶ್ರೀಧರ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ಕೆ.ಸುಧೀರ್ ಅರಣ್ಯ ರಕ್ಷಕ ಅಭಿಜೀತ್ ಬಿ.ಜಿ. ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News