ಮನೆಗೆ ನುಗ್ಗಿ ಸೊತ್ತು ಕಳವು

Update: 2019-06-12 16:17 GMT

ಬೈಂದೂರು, ಜೂ.12: ಶಿರೂರು ಪೇಟೆಯ ದಾಸನಾಡಿ ಕ್ರಾಸ್ ತಿಮ್ಮಣ್ಣ ನಾಯ್ಕ ದೇವಸ್ಥಾನದ ಎದುರಿನ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ವೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.

 ಜೂ.7ರ ಸಂಜೆಯಿಂದ ಜೂ.11ರ ಬೆಳಗಿನ ಮಧ್ಯಾವಧಿಯಲ್ಲಿ ಬಾಷಾ ಸಾಹೇಬ್ ಎಂಬವರ ಮನೆಯ ಸ್ಲ್ಯಾಬ್‌ನ ಮೇಲಿನ ಬಾಗಿಲನ್ನು ದೂಡಿ ಒಳ ನುಗ್ಗಿದ ಕಳ್ಳರು, ಬೆಡ್ ರೂಮಿನ ಮರದ ಕಪಾಟಿನಲ್ಲಿದ್ದ 80,000 ರೂ. ಮತ್ತು ಡೈನಿಂಗ್ ಹಾಲ್‌ನ ಕಪಾಟಿನಲ್ಲಿದ್ದ 20,000 ರೂ. ನಗದು ಹಾಗೂ ಚಿನ್ನದ ಕಿವಿ ಬೆಂಡೋಲೆ, ಚಿನ್ನದ ರಿಂಗ್ ಕಳವುಗೈದಿದ್ದಾರೆ. ಇವುಗಳ ಒಟ್ಟು ಮೌಲ್ಯ 1,35,000ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News