ಬಿಸಿನೀರು ಬಿದ್ದ ಗಾಯಾಳು ಮಗು ಮೃತ್ಯು

Update: 2019-06-12 16:17 GMT

ಕಾಪು, ಜೂ.12: ಸೋಲಾರ್ ಪೈಪ್ ತುಂಡಾಗಿ ಬಿಸಿನೀರು ಮೈಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡ ಮಗು ಜೂ.11ರಂದು ರಾತ್ರಿ 11ಗಂಟೆ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.

ಬಾಗಲಕೋಟ ಜಿಲ್ಲೆಯ ಮೂಧೋಳ ತಾಲೂಕಿನ ಅಮಸಿದ್ಧ ಹಾಗೂ ಜ್ಯೋತಿ ದಂಪತಿಯ ಮಗಳು ಸೌಜನ್ಯ(7) ಮೃತ ದುದೈರ್ವಿ. ಇವರು ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಮೇ 24ರಂದು ಸಂಜೆ 4 ಗಂಟೆಗೆ ಹತ್ತಿರದ ಬಾಡಿಗೆ ಮನೆಯ ಹುಡುಗಿ ಸೌಜನ್ಯಳನ್ನು ಮನೆಯ ಮಾಲಕರ ಮನೆಯ ಮೇಲೆ ಕರೆದುಕೊಂಡು ಹೋಗಿದ್ದಳೆನ್ನಲಾಗಿದೆ.

ಈ ವೇಳೆ ಮನೆಯ ಮೇಲುಗಡೆ ಅಳವಡಿಸಿದ ಸೋಲಾರ್ ಪೈಪ್ ತುಂಡಾಗಿ ಬಿಸಿ ನೀರು ಮಗುವಿನ ಮೈಮೇಲೆ ಬಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಮಗು ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ.

ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News