ಅಕ್ರಮ ಮರಳುಗಾರಿಕೆ: ನಾಲ್ವರ ಸೆರೆ
Update: 2019-06-13 16:27 GMT
ಅಜೆಕಾರು, ಜೂ.13: ಮರ್ಣೆ ಗ್ರಾಮದ ಎಣ್ಣೆಹೊಳೆ ಎಂಬಲ್ಲಿರುವ ಸ್ವರ್ಣ ನದಿಯಲ್ಲಿ ಜೂ.13ರಂದು ಬೆಳಗಿನ ಜಾವ 5.30ರ ಸುಮಾರಿಗೆ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ನಾಲ್ವರನ್ನು ಅಜೆಕಾರು ಪೊಲೀಸರು ಬಂಧಿಸಿದ್ದಾರೆ.
ಮರ್ಣೆ ಗ್ರಾಮದ ಎ.ಮುನಾವರ್ (42), ಗಣೇಶ್ ಭಂಡಾರಿ(41), ಸುರೇಶ್ ಪೂಜಾರಿ(32), ಚಿರಂಜೀವಿ(34) ಬಂಧಿತ ಆರೋಪಿಗಳು. ಇವರಿಂದ 5,500ರೂ. ಮೌಲ್ಯದ ಮರಳು ಸಹಿತ 3 ಲಾರಿಗಳು, ಒಂದು ಕಾರು ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ವಾಹನಗಳ ಒಟ್ಟು ಮೌಲ್ಯ 9,00,000 ರೂ. ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.