‘ಮೇಲ್ತೆನೆ’ಯಿಂದ ‘ನಙಲೆ ರಾಯ-ನಙಲೆ ಪೆರಿಮೆ’-ಗೋಷ್ಠಿ
Update: 2019-06-16 09:29 GMT
ದೇರಳಕಟ್ಟೆ, ಜೂ.16: ಬ್ಯಾರಿ ಲೇಖಕರು ಮತ್ತು ಕಲಾವಿದರ ಬಳಗ ‘ಮೇಲ್ತೆನೆ’ಯ ವತಿಯಿಂದ ಸಂಘಟನೆಯ ಪದಾಧಿಕಾರಿಗಳು ಮತ್ತು ಸದಸ್ಯರ ಹುಟ್ಟೂರಿನ ಹೆಸರು ಹೇಗೆ ಬಂತು?, ಯಾಕೆ ಬಂತು ? ಮತ್ತು ಹುಟ್ಟೂರಿನ ವಿಶೇಷತೆಯ ಕುರಿತು ನಡೆಸಲಾಗುವ ‘ನಙಲೆ ರಾಯ-ನಙಲೆ ಪೆರಿಮೆ’-(ನಮ್ಮೂರು-ನಮ್ಮ ಹೆಮ್ಮೆ) ಗೋಷ್ಠಿಯು ಶನಿವಾರ ಸಂಘಟನೆಯ ಕಚೇರಿಯಲ್ಲಿ ಜರುಗಿತು.
ಮೇಲ್ತೆನೆಯ ಗೌರವಾಧ್ಯಕ್ಷ ಆಲಿಕುಂಞಿ ಪಾರೆ ಅಧ್ಯಕ್ಷತೆ ವಹಿಸಿದ್ದರು. ಅಧ್ಯಕ್ಷ ಹಂಝ ಮಲಾರ್ ‘ಮಲಾರ್ ಅರಸ್ತಾನ’ದ ಬಗ್ಗೆ, ಸದಸ್ಯರಾದ ಇಸ್ಮತ್ ಪಜೀರ್ ‘ಪಜೀರ್’ ಬಗ್ಗೆ, ಮುಹಮ್ಮದ್ ಅಶೀರುದ್ದೀನ್ ಮಂಜನಾಡಿ ‘ಸಾರ್ತಬೈಲ್’ ಊರಿನ ಬಗ್ಗೆ ವಿಷಯ ಮಂಡಿಸಿದರು.
ಈ ಸಂದರ್ಭ ಕೋಶಾಧಿಕಾರಿ ಇಸ್ಮಾಯೀಲ್ ತುಪ್ಪೆ, ಉಪಾಧ್ಯಕ್ಷ ಮುಹಮ್ಮದ್ ಬಾಷಾ ನಾಟೆಕಲ್, ಜೊತೆ ಕಾರ್ಯದರ್ಶಿ ಬಶೀರ್ ಕಲ್ಕಟ್ಟ, ಸದಸ್ಯರಾದ ಬಶೀರ್ ಅಹ್ಮದ್ ಕಿನ್ಯ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಮನ್ಸೂರ್ ಅಹ್ಮದ್ ಸಾಮಣಿಗೆ ಸ್ವಾಗತಿಸಿ, ವಂದಿಸಿದರು.