ಮುದ್ದಣ ಕಾವ್ಯ ಪ್ರಶಸ್ತಿ – 2019: ಅರ್ಜಿ ಆಹ್ವಾನ

Update: 2019-06-17 12:41 GMT

ಮೂಡುಬಿದಿರೆ: ಕಳೆದ 40 ವರುಷಗಳಿಂದ ಮುದ್ದಣ ಕಾವ್ಯ ಪ್ರಶಸ್ತಿಯನ್ನು ನೀಡುತ್ತಾ ಬಂದಿರುವ ಕಾಂತಾವರ ಕನ್ನಡಸಂಘವು 2019ರ ಸಾಲಿನ ಮುದ್ದಣ ಕಾವ್ಯ ಪ್ರಶಸ್ತಿಗಾಗಿ ಮುದ್ರಣಕ್ಕೆ ಸಿದ್ಧವಾಗಿರುವ ಕವನಸಂಗ್ರಹಗಳ ಹಸ್ತಪ್ರತಿಗಳನ್ನು ಸ್ವಾಗತಿಸುತ್ತಿದೆ.

ಪ್ರಶಸ್ತಿಯು   ಹತ್ತು ಸಾವಿರ ರೂ. (10.000/-) ನಗದು ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದ್ದು, ಆಸಕ್ತರು ರೂ. 5/- ಅಂಚೆ ಚೀಟಿ ಹಚ್ಚಿದ ಸ್ವವಿಳಾಸ ಇರುವ ಕವರನ್ನು ಕಳುಹಿಸಿ ಸ್ಪರ್ಧೆಯ ವಿವರಗಳನ್ನು ಪ್ರಧಾನ ಕಾರ್ಯದರ್ಶಿ, ಕಾಂತಾವರ ಕನ್ನಡಸಂಘ (ರಿ), ಅಂಚೆ: ಕಾಂತಾವರ – 574129, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ ಇವರಿಂದ ಅಥವಾ kannadasanghakanthavara@gmail.com ಈ ಮೇಲಿನ ಮಾಹಿತಿಗಳನ್ನು ಪಡೆಯಬಹುದು.

ವಿವರಗಳನ್ನು ಪಡೆಯುವ ಕೊನೆಯ ದಿನಾಂಕ ಜು.30. ಹಸ್ತಪ್ರತಿ ಸ್ವೀಕಾರದ ಕೊನೆಯ ದಿನಾಂಕ ಆ.30 ಆಗಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬೇಕಾದ ದೂರವಾಣಿ: 9008978366

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News