ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ನಲ್ಲಿ ‘ವಿಶ್ವರತ್ನ’ ಅಂತಾರಾಷ್ಟ್ರೀಯ ಎಕ್ಸಿಬಿಷನ್ಗೆ ಚಾಲನೆ
ಮಂಗಳೂರು, ಜೂ.17: ನಗರದ ಕಂಕನಾಡಿಯಲ್ಲಿರುವ ‘ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್’ ಶೋರೂಮ್ನಲ್ಲಿ ಪೊಲ್ಕಿ ಡೈಮಂಡ್ಸ್ ಜುವೆಲ್ಲರಿ, ಅಮೂಲ್ಯ ಹರಳುಗಳ ಆಭರಣ, ಅನ್ಕಟ್ ಡೈಮಂಡ್ಸ್ - ಚಿನ್ನದ ‘ವಿಶ್ವರತ್ನ’ ಎಂಬ ಅಂತಾರಾಷ್ಟ್ರೀಯ ಪ್ರದರ್ಶನ ಮತ್ತು ಮಾರಾಟಕ್ಕೆ ಮೂಡುಬಿದಿರೆಯ ಡಾ. ಎಂ.ಮೋಹನ್ ಆಳ್ವ ಸೋಮವಾರ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ‘ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್’ ಸಂಸ್ಥೆಯು ಭಾರತವಲ್ಲದೆ ವಿದೇಶದಲ್ಲೂ ಮನೆಮಾತಾಗಿದೆ. ವ್ಯವಹಾರದ ಜೊತೆಗೆ ಸಾಮಾಜಿಕ ಕಳಕಳಿಯನ್ನೂ ಹೊಂದಿ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ. ಒಂದು ಸಾವಿರ ಸಿಬ್ಬಂದಿ ವರ್ಗಕ್ಕೆ ನೌಕರಿ ನೀಡುವುದು ಕೂಡ ಕ್ರಾಂತಿಕಾರಿ ಹೆಜ್ಜೆಯಾಗಿದೆ. ಸೌಂದರ್ಯ ಪ್ರಜ್ಞೆಗೆ ವಿಶೇಷ ಒತ್ತು ನೀಡುವ ಸಂಸ್ಥೆಯು ವಿಶಿಷ್ಟ ಸಂದರ್ಭಗಳಲ್ಲಿ ಇಂತಹ ಪ್ರದರ್ಶನ-ಮಾರಾಟದ ವ್ಯವಸ್ಥೆಯ ಮೂಲಕ ಗ್ರಾಹಕರ ಸೇವೆಗೆ ಮುಂದಾಗಿರುವುದು ಸಂತಸದ ವಿಚಾರ. ಗ್ರಾಹಕರು ಕೂಡ ಸಂಸ್ಥೆಯತ್ತ ಹೆಚ್ಚಿನ ಒಲವು ತೋರಬೇಕಿದೆ ಎಂದರು.
ಈ ಸಂದರ್ಭ ಮುಖ್ಯ ಅತಿಥಿಗಳಾಗಿ ತುಂಬೆ ಬಿ.ಎ. ಗ್ರೂಪ್ನ ಆಡಳಿತ ನಿರ್ದೇಶಕ ಬಿ. ಅಬ್ದುಲ್ ಸಲಾಂ, ಮಿಸ್ಬಾ ವಿಮೆನ್ಸ್ ಕಾಲೇಜಿನ ಅಧ್ಯಕ್ಷ ಬಿ.ಎಂ.ಮುಮ್ತಾಝ್ ಅಲಿ, ಹಜಾಜ್ ಗ್ರೂಪ್ನ ಹನೀಫ್ ಹಾಜಿ ಗೋಳ್ತಮಜಲು, ಸಿಂಗಾರಿ ಬೀಡಿಯ ಮಾಲಕ ಸುಲೈಮಾನ್ ಹಾಜಿ ನಾರ್ಶ, ಮುಕ್ಕ ಸೀ ಫುಡ್ನ ನಿರ್ದೇಶಕ ಆರೀಫ್, ಎಚ್ಎನ್ಜಿಸಿ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್ನ ಅಹ್ಮದ್ ಮನ್ಸೂರ್, ಇಂಟಕ್ ರಾಜ್ಯ ಕಾರ್ಯದರ್ಶಿ ಕೆ.ಎಸ್.ಅಮೀರ್ ಅಹ್ಮದ್ ತುಂಬೆ, ಹಸೀನಾ ನೌಫಾಲ್ ಯೆನೆಪೊಯ, ಡಾ. ಕವಿತಾ ಡಿಸೋಜ, ಅರುಣಾ ಎಸ್.ಶೆಟ್ಟಿ, ಶಹನಾಝ್ ಬೇಗಂ, ಸಫಿಯಾ ಮುಹಮ್ಮದ್, ಡಾ. ಆರ್. ಪುರುಷೋತ್ತಮ್, ಜಮೀಲಾ ರಶೀದ್ ಭಾಗವಹಿಸಿ ಶುಭ ಹಾರೈಸಿದರು.
ಪೊಲ್ಕಿ ಡೈಮಂಡ್ಸ್ ಸಹಿತ ಪ್ರದರ್ಶನಗೊಳ್ಳುವ ಆಭರಣಗಳು ಅತ್ಯಾಧುನಿಕ ವಿನ್ಯಾಸದೊಂದಿಗೆ ರೂಪುಗೊಂಡಿವೆ. ದುಬೈ, ಇಸ್ತಾಂಬುಲ್, ಹಾಂಗ್ಕಾಂಗ್ನಲ್ಲಿ ಜರುಗಿದ ಅಂತಾರಾಷ್ಟ್ರೀಯ ಜುವೆಲ್ಲರಿ ಶೋಗಳಲ್ಲಿ ಕೂಡ ಇವುಗಳು ಪ್ರದರ್ಶನಗೊಂಡಿವೆ.
ನೀಲ, ಪಚ್ಚೆ ಸಹಿತ ನವರತ್ನಗಳು ಇತ್ಯಾದಿಗಳ ಅಪಾರ ಸಂಗ್ರಹ ಇಲ್ಲಿದೆ. ಪಾರ್ಟಿವೇರ್, ಬ್ರೈಡಲ್ವೇರ್, ಡೈಲಿವೇರ್, ಆಫೀಸ್ವೇರ್ ಮುಂತಾದ ಆಭರಣಗಳು ವಿಶೇಷ ಆಕರ್ಷಣೆಯೂ ಇದೆ. ಜೂ.30ರವರೆಗೆ 1 ಕ್ಯಾರಟ್ ವಜ್ರದಲ್ಲಿ 6500 ರೂ. ಸಹಿತ ವಿವಿಧ ಖರೀದಿಗೆ ವಿವಿಧ ರಿಯಾಯಿತಿ ಕೊಡುಗೆಯೂ ಇದೆ.
ಸುಲ್ತಾನ್ ಡೈಮಂಡ್ಸ್ನ ನೂತನ ಶೋರೂಮ್ ಶೀಘ್ರದಲ್ಲಿ ಸುರತ್ಕಲ್-ಎಚ್ಎನ್ಜಿಸಿ ಮಾಲ್ನಲ್ಲಿ ಆರಂಭಗೊಳ್ಳಲಿದೆ ಎಂದು ಪ್ರಕಟನೆ ತಿಳಿಸಿದೆ.
ಇದು ಆರನೆಯ ವರ್ಷದ ಪ್ರದರ್ಶನವಾಗಿದೆ. ಪೊಲ್ಕಿ ಡೈಮಂಡ್ಸ್ನ ತಯಾರಿ ವೆಚ್ಚದಲ್ಲಿ ಶೇ.25 ರಿಯಾಯಿತಿಯನ್ನು ಗ್ರಾಹಕರಿಗೆ ನೀಡಲಾಗುವುದು ಎಂದು ಸುಲ್ತಾನ್ ಗ್ರೂಪ್ನ ವ್ಯವಸ್ಥಾಪಕ ನಿರ್ದೇಶಕ ಡಾ.ಟಿ.ಎಂ. ಅಬ್ದುಲ್ ರವೂಫ್ ತಿಳಿಸಿದ್ದಾರೆ.