ಬ್ರಹ್ಮಾವರ: 11ಮಂದಿಗೆ ಹಕ್ಕುಪತ್ರ ವಿತರಣೆ

Update: 2019-06-17 15:34 GMT

ಬ್ರಹ್ಮಾವರ, ಜೂ.17: ಬ್ರಹ್ಮಾವರದಲ್ಲಿರುವ ಶಾಸಕರ ಕಚೇರಿಯಲ್ಲಿ ಇಂದು ನಡೆದ ಸಾರ್ವಜನಿಕರ ಅಹವಾಲು ಸ್ವೀಕಾರದ ಕಾರ್ಯಕ್ರಮದ ವೇಳೆ ಬ್ರಹ್ಮಾವರ ತಾಲೂಕಿನ 11 ಮಂದಿ ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ಶಾಸಕ ಕೆ.ರಘುಪತಿ ಭಟ್ ವಿತರಿಸಿದರು.

ಅಲ್ಲದೇ ಪ್ರಾಕೃತಿಕ ವಿಕೋಪದಿಂದ ನಷ್ಟ ಅನುಭವಿಸಿದವರಿಗೆ ಪರಿಹಾರದ ಚೆಕ್ಕುಗಳನ್ನು ವಿತರಿಸಲಾಯಿತು. ಇಬ್ಬರಿಗೆ ಪರಿಹಾರದ ಚೆಕ್ ನೀಡಿದರೆ, ವಿದ್ಯುತ್ ತಂತಿ ತುಂಡಾಗಿ ದನವೊಂದು ಅಸುನೀಗಿದ ಘಟನೆಗೆ ಸಂಬಂಧಿಸಿ ದಂತೆ ಮೆಸ್ಕಾಂ ವತಿಯಿಂದ ನೀಡಲಾದ 50,000ರೂ.ಗಳ ಪರಿಹಾರದ ಚೆಕ್‌ನ್ನು ಫಲಾನುಭವಿಗೆ ಶಾಸಕರು ವಿತರಿಸಿದರು.

ಬಳಿಕ ಶಾಸಕರು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ತಾಪಂ ಸದಸ್ಯರು, ಬ್ರಹ್ಮಾವರ ತಹಶೀಲ್ದಾರರು, ಕಂದಾಯ ಪರಿವೀಕ್ಷಕರು, ಮೆಸ್ಕಾಂ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News