ನದಿಗೆ ಬಿದ್ದು ಮೃತ್ಯು

Update: 2019-06-17 16:43 GMT

ಕುಂದಾಪುರ, ಜೂ.17: ಮನೆ ಬಳಿಯ ಚಕ್ರಾ ನದಿಯಲ್ಲಿ ಮೀನು ಹಿಡಿಯಲೆಂದು ತೆರಳಿದ ಮೀನುಗಾರರೊಬ್ಬರು ಅಕಸ್ಮಿಕವಾಗಿ ನೀರಿಗೆ ಬಿದ್ದು ಈಜಲು ಆಗದೇ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ದೇವಲ್ಕುಂದ ಗಾಮದಿಂದ ವರದಿಯಾಗಿದೆ.

ಮೃತರನ್ನು ಚಂದ್ರ ಪೂಜಾರಿ ಎಂದು ಗುರುತಿಸಲಾಗಿದೆ. ಇವರು ಜೂ.15ರ ಸಂಜೆ 4:00ಗಂಟೆಗೆ ಮನೆಯ ಬಳಿ ಹರಿಯುವ ಚಕ್ರಾ ನದಿಯಲ್ಲಿ ಮೀನುಗಾರಿಕೆಗೆಂದು ತೆರಳಿದ್ದು, ರಾತ್ರಿಯಾದರೂ ಬಂದಿರಲಿಲ್ಲ. ಆಸುಪಾಸಿನಲ್ಲಿ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಮರುದಿನ ಜೂ.16ರಂದು ಅಪರಾಹ್ನ 2:00 ಗಂಟೆಗೆ ಚಕ್ರಾ ನದಿಯ ದಕ್ಷಿಣ ಬದಿಯ ದಡದಲ್ಲಿ ಸಿಕ್ಕಿತ್ತು. ಅವರು ರಭಸವಾಗಿ ಹರಿಯುತಿದ್ದ ನದಿಗೆ ಅಕಸ್ಮಿಕವಾಗಿ ಬಿದ್ದು ಈಜಲಾಗದೇ ಮುಳುಗಿ ಮೃತಪಟ್ಟಿರಬೇಕೆಂದು ಶಂಕಿಸಲಾಗಿದೆ.

ಈ ಬಗ್ಗೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News