ಮೂಡ ಮಾಜಿ ಅಧ್ಯಕ್ಷ ಸಂಜೀವ ನಿಧನ: ಸಚಿವ ಖಾದರ್ ಸಂತಾಪ

Update: 2019-06-17 16:56 GMT

ಮಂಗಳೂರು, ಜೂ.17: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಂ. ಸಂಜೀವ ಅವರ ನಿಧನಕ್ಕೆ ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಸಂತಾಪ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯಲ್ಲಿ ಭೂ ಸುಧಾರಣೆ ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೆ ತರಲು ಪರಿಶ್ರಮಿಸಿ, ಬಡವರಿಗೆ ಭೂಮಿ ದೊರಕಲು ಶ್ರಮಿಸಿದ್ದ ಸಂಜೀವ ಅವರು ಜಿಲ್ಲೆ ಕಂಡ ಪ್ರಾಮಾಣಿಕ ರಾಜಕಾರಣಿ. ಮೂಡ ಅಧ್ಯಕ್ಷರಾಗಿದ್ದಾಗ ಅವರು ಮಾಡಿದ್ದ ಸಾಧನೆಗಳು ಇಂದಿಗೂ ಮಾದರಿಯಾಗಿದೆ ಎಂದು ಸಚಿವರು ತಮ್ಮ ಸಂತಾಪದಲ್ಲಿ ಕಂಬನಿ ಮಿಡಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News