​ದ.ಕ. ಜಿಲ್ಲಾ ರಾಜ್ಯ ಸರಕಾರಿ ನೌಕರರ ಸಂಘದ ಚುನಾವಣಾ ಫಲಿತಾಂಶ

Update: 2019-06-17 17:05 GMT

ಮಂಗಳೂರು, ಜೂ.17: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ದ.ಕ. ಜಿಲ್ಲಾ ಶಾಖೆಯ ಕಾರ್ಯಕಾರಿ ಸಮಿತಿಗೆ ಚುನಾವಣೆ ಹಾಗೂ ಅವಿರೋಧವಾಗಿ ಪ್ರತಿನಿಧಿಗಳ ಆಯ್ಕೆ ನಡೆಯಿತು.

 49 ಸರಕಾರಿ ಇಲಾಖೆಗಳ ಒಟ್ಟು 62 ಪ್ರತಿನಿಧಿಗಳನ್ನು ಜಿಲ್ಲಾ ಸಂಘಕ್ಕೆ ಆಯ್ಕೆ ಮಾಡಬೇಕಾಗಿದ್ದು, ಈ ಪೈಕಿ 40 ಇಲಾಖೆಗಳ 46 ಪ್ರತಿನಿಧಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದಿರುವ ಒಂಬತ್ತು ಇಲಾಖೆಗಳ 16 ಪ್ರತಿನಿಧಿ ಸ್ಥಾನಗಳಿಗೆ ಜೂ.13ರಂದು ಚುನಾವಣೆ ಜರುಗಿತು.

 ಚುನಾವಣಾ ಫಲಿತಾಂಶ: ಎಚ್.ಗಣೇಶ್‌ರಾವ್, ಎಂ.ಶಶಿಧರ ಶೆಟ್ಟಿ(ವಾಣಿಜ್ಯ ತೆರಿಗೆ ಇಲಾಖೆ), ಜ್ಯೋತಿ ಪ್ರಕಾಶ್ ಮತ್ತು ವಸಂತ ರಾಜ್ ಎಚ್. (ಲೋಕೋಪಯೋಗಿ ಮತ್ತು ಜಿಪಂ ಇಂಜಿನಿಯರಿಂಗ್), ದೇವದಾಸ್ (ಜಿಪಂ), ಗೋಪಾಲಕೃಷ್ಣ (ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ), ಎಂ.ಹರೀಶ್ ಕುಮಾರ್ (ಮೀನುಗಾರಿಕಾ ಇಲಾಖೆ), ಶಶಿಕಲಾ ಮತ್ತು ಅಶೋಕ ಯಂಕಪ್ಪ ಗುಜಿಲಾರ (ವೈದ್ಯಕೀಯ ಶಿಕ್ಷಣ ಮತ್ತು ಜಿಲ್ಲಾಸ್ಪತ್ರೆ), ಪೋಲೂರು ಮುರಳಿಧರ, ಜಯರಾಮ, ವಾಣಿ, ಮತ್ತು ಇಂದ್ರಾವತಿ ಎನ್. (ಪ್ರಾಥಮಿಕ ಶಾಲೆಗಳು), ಗಿರೀಶ್ ಎಂ.ಕುಂದರ್ (ತಾಂತ್ರಿಕ ಶಿಕ್ಷಣ ಇಲಾಖೆ), ಪ್ರಕಾಶ್ ನಾಯಕ್ ಮತ್ತು ಸಬಿತಾ ಸೇರಾವೋ (ನ್ಯಾಯಾಂಗ ಇಲಾಖೆ) ಚುನಾವಣೆಯಲ್ಲಿ ಜಯಗಳಿಸಿದ್ದಾರೆ.

ಅವಿರೋಧ ಆಯ್ಕೆ: ಶಿವಪ್ಪ (ಕೃಷಿ ಇಲಾಖೆ), ಅಕ್ಷಯ ಭಂಡಾರ್‌ಕರ್ (ಪಶುಸಂಗೋಪನೆ), ಶಿವಾನಂದ, ಕೆ.ದಯಾನಂದ ಮತ್ತು ಪ್ರಸಾದ್ ಎನ್.ಜಿ. (ಕಂದಾಯ ಇಲಾಖೆ), ಸುನಂದಾ (ಆಹಾರ ಮತ್ತು ಸರಬರಾಜು ಇಲಾಖೆ), ಪ್ರದೀಪ್ ಡಿಸೋಜ (ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆ, ತ್ರಿವೇಣಿ ರಾವ್ ಕೆ. (ಸಹಕಾರ ಇಲಾಖೆ), ನವೀನ್‌ಕುಮಾರ್ ಎಂ.ಎಸ್. (ಸಹಕಾರಿ ಸಂಘಗಳ ಲೆಕ್ಕಪರಿಶೋಧನಾ ಇಲಾಖೆ), ರಮೇಶನ್ (ನೀರಾವರಿ ಇಲಾಖೆ), ಸುಧೀರ್ (ಅಬಕಾರಿ ಇಲಾಖೆ), ಹೇಮಚಂದ- ಸಮಾಜ ಕಲ್ಯಾಣ, ಆಗ್ನೇಲ್ ಪಿಂಟೋ (ಅರಣ್ಯ ಇಲಾಖೆ), ಜಗದೀಶ್ ಪಿ. ನವೀನ್‌ಕುಮಾರ್ ಮತ್ತು ಪದ್ಮನಾಭ ಜೋಗಿ (ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ), ಸುಜಾತಾ ಅಂಬರೀಶ್ ಯು.ಕೆ (ಆಯುಷ್ ಮತ್ತು ಇಎಸ್‌ಐ), ಉದಯಕುಮಾರ (ತೋಟಗಾರಿಕೆ ಇಲಾಖೆ), ಪುಟ್ಟ ನಾಯಕ್ ಪಿ. (ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ), ವಿಶ್ವನಾಥ ಜೋಗಿ (ವಾರ್ತಾ ಮತ್ತು ಸಾರ್ವಜಿನಿಕ ಸಂಪರ್ಕ ಇಲಾಖೆ), ಪಿ.ಕೆ.ಕೃಷ್ಣ (ಯುವಜನ ಸೇವೆ ಮತ್ತು ಸಾರ್ವಜನಿಕ ಗ್ರಂಥಾಲಯ ಇಲಾಖೆ), ಲತೇಶ್ (ಕರ್ನಾಟಕ ಸರಕಾರಿ ವಿಮಾ ಇಲಾಖೆ), ಲಿಲ್ಲಿ ಪಾಯಸ್ ಮತ್ತು ಶೆರ್ಲಿ ಸುಮಾಲಿನಿ (ಫ್ರೌಢ ಶಾಲೆಗಳು), ಸುಧೀರ್‌ಕುಮಾರ್ (ಉಚ್ಚಿಲ್ ಸರಕಾರಿ ಕಿರಿಯ ಕಾಲೇಜು), ರಂಜನ್ ಪದವಿ ಕಾಲೇಜು, ಜಯಲಕ್ಷ್ಮಿಆರ್.ಎನ್ (ಮಾರುಕಟ್ಟೆ ಎಪಿಎಂಸಿ), ಪ್ರದೀಪ್ ಕುಮಾರ್ ಆರ್. (ಗಣಿ ಮತ್ತು ಭೂವಿಜ್ಞಾನ ಇಲಾಖೆ), ಬಿ.ಕೆ.ಸತೀಶ್ (ಮೋಟಾರು ವಾಹನ ಇಲಾಖೆ), ಅಶ್ವಿನ್‌ಕುಮಾರ್ ಎಚ್. (ಪೊಲೀಸ್, ಆಡಳಿತ, ಗೃಹರಕ್ಷಕ ಇಲಾಖೆ), ಕೃಷ್ಣಪ್ಪ ನಾಯ್ಕ ಬಿ. (ರೇಷ್ಮೆ ಇಲಾಖೆ), ನವೀನ್ ಫೆರ್ನಾಂಡಿಸ್ (ರಾಜ್ಯ ಲೆಕ್ಕ ಪತ್ರ ಇಲಾಖೆ), ಪ್ರಸನ್ನಕುಮಾರ್ (ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆ ಇಲಾಖೆ), ರಾಘವೇಂದ್ರ ಗಾಮದ (ಎನ್‌ಸಿಸಿ ಮತ್ತು ಕಾರಾಗೃಹ), ಪ್ರದೀಪ (ಮುದ್ರಾಂಕ, ನೋಂದಣಿ, ಸಣ್ಣ ಉಳಿತಾಯ ಇಲಾಖೆ), ಸಂಧ್ಯಾ ಕೆ . (ಖಜಾನೆ ಇಲಾಖೆ), ಮೇರಿ ಡಿ ಡಯಾಸ್ (ಕಾರ್ಮಿಕ, ಕಾರ್ಖಾನೆಗಳು, ಬಾಯ್ಲರ್ ಇಲಾಖೆ), ಉಬೈದುಲ್ಲಾ (ನಗರ ಯೋಜನೆ, ನಗರ ಅಭಿವೃದ್ದಿ ಇಲಾಖೆ), ರೊನಾಲ್ಡ್ ಪ್ರಾನ್ಸಿಸ್ (ಉದ್ಯೋಗ ಮತ್ತು ತರಬೇತಿ ಇಲಾಖೆ), ಜಗದೀಶ್ ಎನ್.ರೇವಣ್ಣನವರ್ (ಧಾರ್ಮಿಕ ದತ್ತಿ, ಕಾನೂನು ಮಾಪನಶಾಸ್ತ್ರ ಇಲಾಖೆ, ಜಿಲ್ಲಾ ತರಬೇತಿ ಕೇಂದ್ರ), ಎಸ್.ನಿರಂಜನ ಮೂರ್ತಿ (ಸರಕಾರಿ ಮುದ್ರಾಣಾಲಯ, ಬಂದರು ಇಲಾಖೆ), ನಾಗೇಶ್ ಪೂಜಾರಿ ಆರ್. (ಗ್ರಾಮೀಣಾಭಿವೃದ್ದಿ, ಪಂಚಾಯತ್ ರಾಜ್ ಇಲಾಖೆ-ತಾಪಂ), ದೀಪಕ್ ಪಿ.ವಿ. (ವಿದ್ಯುತ್ ಪರಿವೀಕ್ಷಣಾ), ಮಹೆಬೂಬಾ ಸುಬಾನಿ (ಸೈನಿಕ ಕಲ್ಯಾಣ ಪುನರ್ವಸತಿ ಇಲಾಖೆ), ರವೀಂದ್ರ ಜಿ. ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎನ್.ಎಸ್.ಶೋಭಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News