ಆರೋಗ್ಯ ಇಲಾಖೆ ಕ್ರಮಕ್ಕೆ ಸಿಐಟಿಯು ಖಂಡನೆ

Update: 2019-06-18 12:44 GMT

ಉಡುಪಿ, ಜೂ.18: ಉಡುಪಿ ಜಿಲ್ಲೆಯ ಆರೋಗ್ಯ ಇಲಾಖೆಯಲ್ಲಿ ಗುತ್ತಿಗೆ ನೌಕರರಾಗಿ ನೇಮಕಗೊಂಡ ಐವರು ಲ್ಯಾಬ್ ಟೆಕ್ನೀಷಿಯನ್ಸ್, ಐವರು ಫಾರ್ಮಸಿಸ್ಟ್ ಹಾಗೂ ಐವರು ಚಾಲಕರನ್ನು ಇತ್ತೀಚೆಗೆ ನೌಕರಿಯಿಂದ ತೆಗೆದು ಹಾಕಿದ ಕ್ರಮವನ್ನು ಸಿಐಟಿಯುವ ಉುಪಿ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದೆ.

ಇಲಾಖೆಯ ಈ ಕ್ರಮ ತೀರಾ ಅನ್ಯಾಯದ್ದು ಹಾಗೂ ಕಾನೂನು ಬಾಹಿರ ವಾಗಿದೆ. ಇದನ್ನು ಸಿಐಟಿಯು ಜಿಲ್ಲಾ ಸಮಿತಿ ಖಂಡಿಸುತ್ತದೆ. ಕೂಡಲೇ ಎಲ್ಲಾ ನೌಕರರನ್ನು ಮರಳಿ ತೆಗೆದುಕೊಂಡು ವಿವಾದವನ್ನು ಇತ್ಯರ್ಥಗೊಳಿಸಬೇಕೆಂದು ಸಿಐಟಿಯು ಜಿಲ್ಲಾ ಸಮಿತಿ ಆಗ್ರಹಿಸಿದೆ.

ತಪ್ಪಿದ್ದಲ್ಲಿ ಗುತ್ತಿಗೆ ನೌಕರರು ಜಿಲ್ಲೆಯಲ್ಲಿ ಸಂಘಟನೆಯಾಗಿ ಸಂಘಟಿತರಾಗಿ ಪ್ರತಿಭಟನೆಗೆ ಮುಂದಾಗುವರು ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಶಂಕರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News