ಬೆಳ್ತಂಗಡಿ: ಗೋಕಳ್ಳತನ; ದೂರು ದಾಖಲು

Update: 2019-06-18 16:35 GMT

ಬೆಳ್ತಂಗಡಿ: ಗೋಕಳ್ಳತನದ ಎರಡು ಪ್ರಕರಣಗಳು ವೇಣೂರು ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ಮುಂಜಾನೆ ನಡೆದಿವೆ.

ಅಳದಂಗಡಿ, ಬಡಗಕಾರಂದೂರು ಗ್ರಾಮದ ನಡಾಯಿ ಮನೆಯ ಸಂಜೀವ ಮುಗೇರ ಎಂಬುವರ ಮನೆಯ ಕೊಟ್ಟಿಗೆಯಲ್ಲಿದ್ದ ಕಟ್ಟಿ ಹಾಕಿದ್ದ ಒಂದು ಹಸುವನ್ನು ಕಳವು ಗೈಯ್ಯಲಾಗಿದೆ. ಅದೇರೀತಿ ಪಿಲ್ಯ ಗ್ರಾಮದ ಸೂಳಬೆಟ್ಟು ಎಂಬಲ್ಲಿನ ಎಸ್. ಆರ್. ಕೇಶವ ಎಂಬುವರ ಮನೆಯ ಹಟ್ಟಿಯಲ್ಲಿ ಕಟ್ಟಿಹಾಕಿದ್ದ ಎರಡು ಹಸುಗಳನ್ನು ದುಷ್ಕರ್ಮಿಗಳು ಕದ್ದೊಯ್ದಿದ್ದಾರೆ. ಎರಡು ಪ್ರಕರಣಗಳು ಬೆಳಗಿನ ಜಾವ ಎರಡು ಗಂಟೆಯಿಂದ ನಾಲ್ಕು ಗಂಟೆಯೊಳಗೆ ನಡೆದಿದೆ ಎಂದು ಅಂದಾಜಿಸಲಾಗಿದೆ. ಅಳದಂಗಡಿಯಲ್ಲಿನ ಸಿಸಿ ಟಿವಿಯಲ್ಲಿ ಇದೇ ವೇಳೆಯಲ್ಲಿ ಎರಡೂ ಮೂರು ವಾಹನಗಳು ಅಳದಂಗಡಿ- ಸೂಳಬೆಟ್ಟು ರಸ್ತೆಯಲ್ಲಿ ಸಂಚರಿಸಿದ್ದನ್ನು ಗಮನಿಸಲಾಗಿದೆ. 

ಸಂತ್ರಸ್ತರು ವೇಣೂರು ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೋಲೀಸರು ತನಿಖೆ ನಡೆಸುತ್ತಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News