ವೆನ್ಲಾಕ್ ಆಸ್ಪತ್ರೆಯ ವೈದ್ಯರ ವಿರುದ್ಧ ಪ್ರತಿಭಟನೆ

Update: 2019-06-19 13:17 GMT

ಮಂಗಳೂರು, ಜೂ.19: ಸೋಮವಾರ ನಡೆದ ವೈದ್ಯರ ಮುಷ್ಕರದ ಸಂದರ್ಭ ಚಿಕಿತ್ಸೆಗೆ ವೆನ್ಲಾಕ್‌ಗೆ ತೆರಳಿದ ವೇಳೆ ಸೂಕ್ತ ಚಿಕಿತ್ಸೆ ನೀಡದೆ ನಿರ್ಲಕ್ಷ ತೋರಿದ್ದಲ್ಲದೆ, ಆಕ್ರೋಶ ವ್ಯಕ್ತಪಡಿಸಿದ ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಜೈಲಿಗೆ ಅಟ್ಟಲು ಕಾರಣರಾದ ವೆನ್ಲಾಕ್‌ನ ಆರ್‌ಎಂಒ ಡಾ. ರಾಜೇಶ್ವರಿ ದೇವಿ ಮತ್ತಿತರ ಕಾರ್ಯವೈಖರಿಯನ್ನು ಖಂಡಿಸಿ ಶ್ರೀರಾಮ ಸೇನೆಯ ದ.ಕ.ಜಿಲ್ಲಾ ಸಮಿತಿಯು ಬುಧವಾರ ದ.ಕ.ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು.

ಈ ಸಂದರ್ಭ ಸೇನೆಯ ಮುಖಂಡರಾದ ಆನಂದ ಶೆಟ್ಟಿ ಅಡ್ಯಾರ್, ಪ್ರಸಾದ್ ಉಜಿರೆ, ಕಿಶೋರ್ ಸನಿಲ್, ಜೀವನ್ ನೀರುಮಾರ್ಗ, ಪ್ರೀಪ್ ಮೂಡುಶೆಡ್ಡೆ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News