ಗಾಯಗೊಂಡ ರಾಷ್ಟ್ರೀಯ ಪಕ್ಷಿ ನವಿಲಿನ ರಕ್ಷಣೆ

Update: 2019-06-19 16:46 GMT

ಉಡುಪಿ, ಜೂ.19: ಪರ್ಕಳದ ಶೆಟ್ಟಿಬೆಟ್ಟುವಿನ ಮುಖ್ಯಪ್ರಾಣ ಮಹಾವಿಷ್ಣು ದೇವಸ್ಥಾನದಲ್ಲಿ ಕಾಲಿಗೆ ಗಾಯಗೊಂಡು ಬಿದಿದ್ದ ನವಿಲನ್ನು ಸ್ಥಳೀಯರು ರಕ್ಷಿಸಿರುವ ಘಟನೆ ಇಂದು ನಡೆದಿದೆ.

ನಡೆದಾಡಲು ಸಾಧ್ಯವಾಗದೆ ಅಸಹಾಯಕ ಸ್ಥಿತಿಯಲ್ಲಿದ್ದ ನವಿಲನ್ನು ಭರತೇಶ್ ಆಚಾರ್ಯ, ದೇವಸ್ಥಾನದ ಮುಖ್ಯಸ್ಥ ಹರಿಚಂದ್ರ ಉಪಾಧ್ಯಾಯ ರಕ್ಷಣೆ ಮಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ಗಣೇಶ್‌ರಾಜ್ ಸರಳಬೆಟ್ಟು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.

ಸ್ಥಳಕ್ಕೆ ಆಗಮಿಸಿದ ಇಲಾಖೆ ಸಿಬ್ಬಂದಿ ಹಾಗೂ ವೈದ್ಯ ಪ್ರಶಾಂತ್ ಶೆಟ್ಟಿ ನವಿಲಿಗೆ ಚಿಕಿತ್ಸೆ ನೀಡಿದರು. ಎರಡು ದಿನಗಳ ಕಾಲ ನವಿಲನ್ನು ಆರೈಕೆ ಮಾಡು ವಂತೆ ವೈದ್ಯರು ಹಾಗೂ ಸಿಬ್ಬಂದಿ ಸುರೇಶ್ ಗಾಣಿಗ ಸ್ಥಳೀಯರಿಗೆ ಸಲಹೆ ನೀಡಿದರು. ಅದರಂತೆ ನವಿಲನ್ನು ದೇವಸ್ಥಾನದ ಸಮೀಪದ ಸುರಕ್ಷತಾ ಕೋಣೆಯಲ್ಲಿ ಇರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News