ರೈಲಿನಡಿಗೆ ಹಾರಿ ಕಾರು ಚಾಲಕ ಆತ್ಮಹತ್ಯೆ

Update: 2019-06-19 16:54 GMT

ಮಣಿಪಾಲ, ಜೂ.19: ಸಾಲದ ಚಿಂತೆಯಲ್ಲಿ ಮನನೊಂದ ಮಣಿಪಾಲ ಟ್ಯಾಕ್ಸಿ ಅಸೋಸಿಯೇಶನ್ ಮಾಜಿ ಅಧ್ಯಕ್ಷ ದಿನೇಶ್ ಎಂ.ಸುವರ್ಣ(47) ಎಂಬವರು ಚಲಿಸುತ್ತಿದ್ದ ರೈಲಿನಡಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಬೆಳಗ್ಗೆ 7:55ರ ಸುಮಾರಿಗೆ ಪೆರಂಪಳ್ಳಿ ರೈಲ್ವೆ ಸೇತುವೆ ಸಮೀಪ ನಡೆದಿದೆ.

ಸಗ್ರಿ ಮೂಲದ ಪ್ರಸ್ತುತ ಮಣಿಪಾಲ ಅನಂತನಗರದ ಬಾಡಿಗೆ ಮನೆಯಲ್ಲಿ ವಾಸವಾಗಿರುವ ದಿನೇಶ್ ಸುವರ್ಣ, ಒಂದು ತಿಂಗಳ ಹಿಂದೆ ಸಾಲ ಮಾಡಿ ಮಗಳಿಗೆ ಮದುವೆ ಮಾಡಿದ್ದರು. ಇತ್ತೀಚೆಗೆ ಪಡುಬಿದ್ರೆಯಲ್ಲಿ ಅವರ ಕಾರು ಅಪಘಾತಕ್ಕೀಡಾಗಿ ನಷ್ಟ ಹೊಂದಿದ್ದರು ಎಂದು ತಿಳಿದುಬಂದಿದೆ.

ಇದೇ ಚಿಂತೆಯಲ್ಲಿ ಮಾನಸಿಕವಾಗಿ ನೊಂದ ಅವರು ಎರ್ನಾಕುಲಂನಿಂದ ದೆಹಲಿಗೆ ಹೋಗುತ್ತಿದ್ದ ತುರಂತೋ ರೈಲಿನಡಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿ ದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News