ಬಾವಿಯೊಳಗೆ ಉಸಿರುಗಟ್ಟಿ ಮೃತ್ಯು

Update: 2019-06-19 16:55 GMT

ಬ್ರಹ್ಮಾವರ, ಜೂ.19: ಕೊಡಪಾನ ತೆಗೆಯಲು ಬಾವಿಗೆ ಇಳಿದ ವ್ಯಕ್ತಿ ಯೊಬ್ಬರು ಉಸಿರುಗಟ್ಟಿ ಮೃತಪಟ್ಟ ಘಟನೆ ಜೂ.18ರಂದು ಸಂಜೆ 6ಗಂಟೆಗೆ ರಂಗನಕೆರೆ ಎಂಬಲ್ಲಿ ನಡೆದಿದೆ.

ಮೃತರನ್ನು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಗಂಗಪ್ಪಗುರಿಕಾರ ಎಂಬವರ ಮಗ ಮಂಜುನಾಥ ಗುರಿಕಾರ್(26) ಎಂದು ಗುರುತಿಸಲಾಗಿದೆ. ಇವರು ರಂಗನಕೆರೆಯ ಅಬ್ದುಲ್ ಖಾದರ್ ಎಂಬವರ ಮನೆಯ ಬಾವಿಯಲ್ಲಿ ರುವ ಕೊಡಪಾನವನ್ನು ತೆಗೆಯಲು ಬಾವಿಗೆ ಇಳಿದಿದ್ದು, ಈ ವೇಳೆ ಆಳವಾದ ಬಾವಿಯೊಳಗೆ ಮಂಜುನಾಥ್ ಉಸಿರುಗಟ್ಟಿ ಮೇಲೆ ಬರಲು ಆಗದೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News