ಅಂಚೆ ಇಲಾಖೆಯಿಂದ ಫೋಟೊಗ್ರಫಿ ಸ್ಪರ್ಧೆ

Update: 2019-06-19 17:13 GMT

ಉಡುಪಿ, ಜೂ.19:ಭಾರತೀಯ ಅಂಚೆ ಇಲಾಖೆ ಸ್ವಾತಂತ್ರೋತ್ಸವ-2019 ರ ಪ್ರಯುಕ್ತ ‘ಗಾಂಧಿಯನ್ ಹೆರಿಟೇಜ್ ಇನ್ ಮಾಡರ್ನ್ ಇಂಡಿಯಾ’ ಎಂಬ ವಿಷಯದ ಕುರಿತಂತೆ ಛಾಯಾಚಿತ್ರ ಸ್ಪರ್ಧೆಯನ್ನು ಏರ್ಪಡಿಸಿದೆ.

ಸ್ಪರ್ಧೆಯಲ್ಲಿ ಭಾಗವಹಿಸಲು ಯಾವುದೇ ವಯೋಮಿತಿಯ ನಿರ್ಬಂಧ ವಿಲ್ಲ. ವಿಜೇತರಿಗೆ ಮೊದಲ ಬಹುಮಾನ 50,000 ರೂ, ದ್ವಿತೀಯ ಬಹುಮಾನ 25,000 ರೂ, ತೃತೀಯ ಬಹುಮಾನ 10,000 ರೂ. ಹಾಗೂ ತಲಾ 5,000 ರೂ.ಗಳ 5 ಸಮಾಧಾನಕರ ಬಹುಮಾನಗಳಿರುತ್ತವೆ.

ಪ್ರವೇಶಪತ್ರಗಳನ್ನು ಎಡಿಜಿ (ಫಿಲಾಟೇಲಿ), ಡಾಕ್ ಭವನ, ಸಂಸದ್ ಮಾರ್ಗ್, ಹೊಸದಿಲ್ಲಿ-110001 ಈ ವಿಳಾಸಕ್ಕೆ ಕಳುಹಿಸಬೇಕು. ಪ್ರವೇಶ ಪತ್ರಗಳು ಮೇಲಿನ ವಿಳಾಸವನ್ನು ತಲುಪಲು ಕೊನೆಯ ದಿನ ಜೂ.30. ಈ ಕುರಿತು ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್- www.indiapost.gov.in -ಗೆ ಭೇಟಿ ನೀಡಬಹುದು ಎಂದು ಉಡುಪಿ ವಿಭಾಗದ ಅಂಚೆ ಅಧೀಕ್ಷಕರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News