ಚಂದ್ರಬಾಬು ನಾಯ್ಡುಗೆ ಆಘಾತ: ಟಿಡಿಪಿಯ ನಾಲ್ವರು ರಾಜ್ಯಸಭಾ ಸದಸ್ಯರು ಬಿಜೆಪಿಗೆ
Update: 2019-06-20 14:42 GMT
ಹೊಸದಿಲ್ಲಿ, ಜೂ.20: ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಾರ್ಟಿಯ ನಾಲ್ಕು ರಾಜ್ಯಸಭಾ ಸದಸ್ಯರು ಇಂದು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ರನ್ನು ಭೇಟಿಯಾದ ಈ ನಾಲ್ವರು ತಕ್ಷಣದಿಂದ ಜಾರಿಗೆ ಬರುವಂತೆ ಟಿಡಿಪಿ ಸಂಸದೀಯ ಪಕ್ಷವನ್ನು ಬಿಜೆಪಿ ಜೊತೆ ವಿಲೀನಗೊಳಿಸುವಂತೆ ಮನವಿ ಸಲ್ಲಿಸಿದರು.
ವೈಎಸ್ ಚೌಧರಿ, ಸಿಎಂ ರಮೇಶ್, ಗರಿಕಾಪತಿ ಮೋಹನ್ ರಾವ್ ಹಾಗು ಟಿಜಿ ವೆಂಕಟೇಶ್ ಬಿಜೆಪಿಗೆ ಸೇರ್ಪಡೆಗೊಂಡ ನಾಲ್ವರು ಟಿಡಿಪಿ ಸಂಸದರು.
ಸದ್ಯ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರ ಅಮೆರಿಕದಲ್ಲಿ ಕುಟುಂಬದೊಂದಿಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದು ಹೊಸದೇನಲ್ಲ. ಈ ಬಗ್ಗೆ ಕಾರ್ಯಕರ್ತರು ವಿಚಲಿತರಾಗಬೇಕಿಲ್ಲ ಎಂದರಲ್ಲದೆ, ಟಿಡಿಪಿಯನ್ನು ದುರ್ಬಲಗೊಳಿಸುವ ಬಿಜೆಪಿಯ ಯತ್ನವನ್ನು ಟೀಕಿಸಿದರು.