ಕೊಟ್ಟಿಗೆಯಿಂದ ಜಾನುವಾರು ಕಳವು

Update: 2019-06-20 17:08 GMT

ಬೈಂದೂರು, ಜೂ.20: ಎಳಜಿತ್ ಗ್ರಾಮದ ಮನೆಗಳ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಜಾನುವಾರುಗಳನ್ನು ಜೂ.19ರಂದು ನಸುಕಿನ ವೇಳೆ ಒಂದು ಗಂಟೆ ಸುಮಾರಿಗೆ ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.

ರಿಷಿಕಾ ಗೌಡ ಎಂಬವರ ಮನೆಯ ಕೊಟ್ಟಿಗೆಯಲ್ಲಿ ಕಟ್ಟಿದ್ದ ಒಟ್ಟು 40 ಸಾವಿರ ರೂ. ವೌಲ್ಯದ ಎರಡು ಜಾನುವಾರು ಮತ್ತು ರಾಮ ಪೂಜಾರಿ ಎಂಬವರ ಮನೆಯ ಕೊಟ್ಟಿಗೆಯಲ್ಲಿ ಕಟ್ಟಿದ್ದ ಒಟ್ಟು 48ಸಾವಿರ ರೂ. ವೌಲ್ಯದ ಮೂರು ಜಾನುವಾರುಗಳನ್ನು ಕಳವು ಮಾಡಲಾಗಿದೆ ಎಂದು ದೂರಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಬ್ರಿ:  ಕುಚ್ಚೂರು ಗ್ರಾಮದ ಸಳ್ಳೆಕಟ್ಟೆ ಎಂಬಲ್ಲಿ ಜೂ.19ರಂದು ರಾತ್ರಿ ವೇಳೆ ಗೋಪಾಲಕೃಷ್ಣ ನಾಯ್ಕ ಎಂಬವರ ಮನೆಯ ಹಟ್ಟಿಯಲ್ಲಿ ಕಟ್ಟಿ ಹಾಕಿದ್ದ ಸುಮಾರು 45ಸಾವಿರ ರೂ. ವೌಲ್ಯದ ಮೂರು ದನಗಳು ಕಳವಾಗಿರುವ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News